ಇಸ್ಪೀಟ್ ಆಡುತ್ತಿದ್ದ ಆರೋಪ: ನಾಲ್ಕು ಮಂದಿ ಸೆರೆ

ಸುರತ್ಕಲ್ : ಹಣ ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ 4 ಮಂದಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸ್ಥಳೀಯರಾದ ನಿಂಗಪ್ಪ ಪಾಟೀಲ್, ಶರಣಪ್ಪ ಗುಳಬಾಳ, ಸುನೀಲ್, ಸಕ್ರಪ್ಪ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರಿಂದ ಆಟಕ್ಕೆ ಬಳಸಿದ್ದ 4 ಮೊಬೈಲ್ ಫೋನ್ಗಳು, 1980 ರೂ. ನಗದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ವಹಿಸಲಾಗಿದೆ ಎಂದು ಸುರತ್ಕಲ್ ಪೊಲೀಸರು ಮಾಹಿತಿ ನೀಡಿದ್ದಾರೆ.
Next Story





