ರಾಷ್ಟ್ರೀಯ ಈಜು ಸ್ಪರ್ಧೆ: ಚಿಂತನ್ ಶೆಟ್ಟಿಗೆ ಒಂದು ಚಿನ್ನ, ನಾಲ್ಕು ಬೆಳ್ಳಿ ಪದಕ

ಮಂಗಳೂರು, ಜ.12: ಹೊಸದಿಲ್ಲಿಯ ಡಾ.ಶ್ಯಾಮ್ಪ್ರಸಾದ್ ಮುಖರ್ಜಿ ಈಜು ಸಂಕೀರ್ಣದಲ್ಲಿ ಜ.3ರಿಂದ 9ರವರೆಗೆ ನಡೆದ 67ನೇ ಸ್ಕೂಲ್ ಗೇಮ್ ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ನಡೆದ ರಾಷ್ಟ್ರೀಯ ಈಜು ಚಾಂಪಿಯನ್ ಶಿಪ್ 2023-24 ಈಜು ಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್ನ ಚಿಂತನ್ ಎಸ್. ಶೆಟ್ಟಿ ಒಂದು ಚಿನ್ನ, ನಾಲ್ಕು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.
ಚಿಂತನ್ ಎಸ್. ಶೆಟ್ಟ 17 ವರ್ಷದ ಬಾಲಕರ ವಿಭಾಗದಲ್ಲಿ ಸ್ಪರ್ಧಿಸಿ 1 ಚಿನ್ನ ಹಾಗೂ 4 ಬೆಳ್ಳಿ ಪದಕಗಳನ್ನು ಗೆದ್ದು ನಮ್ಮ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಇವರು 50 ಮೀಟರ್ ಪ್ರೈಸ್ಟೈಲ್ - ಚಿನ್ನ, 100 ಮೀಟರ್ ಪ್ರಿಸ್ಟಲ್ - ಬೆಳ್ಳಿ, 50 ಮೀಟರ್ ಬಟರ್ ಫ್ಲೈ ಬೆಳ್ಳಿ ಹಾಗೂ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ 4100 ಮೀಟರ್ ಮಿಡ್ಲೆ ರಿಲೆ ಮತ್ತು 4*100 ಮೀಟರ್ ಪ್ರಿಸ್ಟಲ್ ರಿಲೆಗಳಲ್ಲಿ ಬೆಳ್ಳಿ ಪದಕಗಳನ್ನು ಗಳಿಸಿರುತ್ತಾರೆ. ಈ ಮೂಲಕ ತಮ್ಮ ಅದ್ಭುತ ಪ್ರದರ್ಶನದಿಂದ ಕರ್ನಾಟಕ ರಾಜ್ಯ ತಂಡವು 17ರ ಬಾಲಕರ ವಿಭಾಗದಲ್ಲಿ ದ್ವೀತಿಯ ತಂಡ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಳ್ಳುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
ಚಿಂತನ್ ಎಸ್. ಶೆಟ್ಟಿ ಇವರು ಮಂಗಳೂರಿನ ಬಂಟ್ಸ್ ಹಾಸ್ಟೆಲ್ನಲ್ಲಿರುವ ಶ್ರೀ ರಾಮಕೃಷ್ಣ ಹೈಸ್ಕೂಲ್ನ ವಿದ್ಯಾರ್ಥಿಯಾಗಿ ರುತ್ತಾರೆ. ಇವರು ಕ್ಲಬ್ನ ಹಿರಿಯ ಈಜು ತರಬೇತುದಾರ ಎಂ. ಶಿವಾನಂದ ಗಟ್ಟಿ ಇವರ ಮಾಗದರ್ಶನದಲ್ಲಿ ಮುಖ್ಯ ತರಬೇತುದಾರ ಶಿಶಿರ್ ಎಸ್. ಗಟ್ಟ (ಎನ್.ಐ.ಎಸ್.), ತರಬೇತುದಾರರು ಕೀರ್ತನ್ ಎಸ್. ಶೆಟ್ಟಿ, ಚೇತನ್ ಎಸ್. ಶೆಟ್ಟಿ, ರಾಜೇಶ್ ಖಾರ್ವಿ ಬೆಂಗ್ರೆ ಇವರಿಂದ ಮಂಗಳೂರು ಮಹಾನಗರ ಪಾಲಿಕೆ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ.







