ಸಮುದ್ರ ಬದಿ ನಿಂತಿದ್ದ ಮಹಿಳೆಗೆ ಬೋಟ್ ಢಿಕ್ಕಿ: ಕದಳಿ ಬೀಚ್ ಟೂರಿಸಂ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲು
![ಸಮುದ್ರ ಬದಿ ನಿಂತಿದ್ದ ಮಹಿಳೆಗೆ ಬೋಟ್ ಢಿಕ್ಕಿ: ಕದಳಿ ಬೀಚ್ ಟೂರಿಸಂ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲು ಸಮುದ್ರ ಬದಿ ನಿಂತಿದ್ದ ಮಹಿಳೆಗೆ ಬೋಟ್ ಢಿಕ್ಕಿ: ಕದಳಿ ಬೀಚ್ ಟೂರಿಸಂ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲು](https://www.varthabharati.in/h-upload/2024/02/12/1243170-347379.gif)
ಪಣಂಬೂರು: ಬೋಟ್ನ ಚಾಲಕನ ನಿರ್ಲಕ್ಷ್ಯದ ಚಾನೆಯಿಂದಾಗಿ ವ್ಯಕ್ತಿಯೊಬ್ಬರಿಗೆ ಬೋಟ್ ಗುದ್ದಿ ಗಾಯಗಳಾಗಿದ್ದು, ಕದಳಿ ಬೀಚ್ ಟೂರಿಸಂ ನಿರ್ವಹಣೆ ಸಂಸ್ಥೆಯ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಿಂದ ಹಾಸನ ಜಿಲ್ಲೆ ಬೇಲೂರು ತಾಲೂಕಿನ ನಿವಾಸಿ ಜಬೀನ ಎಂಬವರಿಗೆ ಗಾಯಗಳಾಗಿದ್ದು ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಜಬೀನ ಅವರು ರವಿವಾರ ತನ್ನ ಕುಟುಂಬದೊಂದಿಗೆ ಪಣಂಬೂರು ಬೀಚ್ ಗೆ ತೆರಳಿದ್ದರು. ಮಧ್ಯಾಹ್ನದ ವೇಳೆ ಸಮುದ್ರ ದಡದಲ್ಲಿ ನಿಂತು ವಸ್ತುಗಳನ್ನು ಜೋಡಿಸುತ್ತಿದ್ದ ಸಂದರ್ಭ ಸಮುದ್ರದಲ್ಲಿ ಪ್ರವಾಸಿಗರನ್ನು ಸುತ್ತಾಡಿಸುವ ಬೋಟ್ ವೊಂದು ಚಾಲಕನ ನಿರ್ಲಕ್ಷ್ಯ ಚಾಲನೆಯಿಂದಾಗಿ ಜಬೀನ ಅವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಸಂಬಂಧ ಜಬೀನ ಅವರು ಬೋಟ್ನ ಚಾಲಕ, ಬೀಚ್ ಟೂರಿಸಂ ನಿರ್ವಹಣೆ ಹೊತ್ತಿರುವ ಕದಳಿ ಬೀಚ್ ಟೂರಿಸಂ ಸಂಸ್ಥೆಯ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಪೊಲೀಸರು, ಬೋಟ್ ಚಾಲಕ ಮತ್ತು ಕದಳಿ ಬೀಚ್ ಟೂರಿಸಂ ಸಂಸ್ಥೆಯ ವಿರುದ್ಧ ಐಪಿಸಿ ಕಲಂ 280, 337ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.