ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ರನ್ನು ಭೇಟಿಯಾದ ಪದ್ಮರಾಜ್
![ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ರನ್ನು ಭೇಟಿಯಾದ ಪದ್ಮರಾಜ್ ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ರನ್ನು ಭೇಟಿಯಾದ ಪದ್ಮರಾಜ್](https://www.varthabharati.in/h-upload/2024/04/02/1257941-whatsapp-image-2024-04-02-at-93633-pm.webp)
ಮಂಗಳೂರು : ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪೌಲ್ ಸಲ್ದಾನ್ ಅವರನ್ನು ಮಂಗಳವಾರ ಭೇಟಿಯಾದರು.
ಈ ಸಂದರ್ಭ ಪ್ರಾರ್ಥನೆ ಸಲ್ಲಿಸಿದ ಬಿಷಪ್ ಅವರು, ಪದ್ಮರಾಜ್ ಗೆಲುವಿಗೆ ಹಾರೈಸಿದರು.
ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿ ’ಸೋಜ, ಮಾಜಿ ಸಚಿವ ರಮಾನಾಥ ರೈ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಶಾಸಕ ಜೆ.ಆರ್. ಲೋಬೊ, ಟಿ.ಕೆ. ಸುಧೀರ್, ಭರತೇಶ್, ಗಿರೀಶ್ ಆಳ್ವ, ಸಮಾಜ ಸೇವಕ ಧರ್ಮರಾಜ್ ಅಮ್ಮುಂಜ ಮೊದಲಾದವರು ಉಪಸ್ಥಿತರಿದ್ದರು.
Next Story