ಯುವ ಮತದಾರರು ಹಕ್ಕಿನ ಮಹತ್ವ ಅರಿತುಕೊಳ್ಳಬೇಕು: ಪಿ.ಎಸ್ ವಸ್ತ್ರದ್
![ಯುವ ಮತದಾರರು ಹಕ್ಕಿನ ಮಹತ್ವ ಅರಿತುಕೊಳ್ಳಬೇಕು: ಪಿ.ಎಸ್ ವಸ್ತ್ರದ್ ಯುವ ಮತದಾರರು ಹಕ್ಕಿನ ಮಹತ್ವ ಅರಿತುಕೊಳ್ಳಬೇಕು: ಪಿ.ಎಸ್ ವಸ್ತ್ರದ್](https://www.varthabharati.in/h-upload/2024/04/03/1258222-3-yuva-matadararu.webp)
ಮಂಗಳೂರು : ಯುವ ಮತದಾರರು ಮತದಾನದ ಮಹತ್ವವನ್ನು ಅರಿತುಕೊಂಡು ಮುಂದಿನ ಚುನಾವಣೆಯ ಮತದಾನದ ದಿನದಂದು ಹಕ್ಕು ಚಲಾಯಿಸಬೇಕು ಹಾಗೂ ಸಮಾಜದ ಇತರ ಜನರೂ ಮತದಾನದಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ದ.ಕ.ಜಿಲ್ಲಾ ಸ್ವೀಪ್ ಸಮಿತಿ, ದ.ಕ. ಜಿಪಂ ಹಾಗೂ ಮಂಗಳೂರು ತಾಪಂ ವತಿಯಿಂದ ನಗರದ ಬಲ್ಮಠ ಸರಕಾರಿ ಪದವಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಮತದಾರರ ಜಾಗೃತಿ ಅಭಿಯಾನದ ಪ್ರಯುಕ್ತ ವಿದ್ಯಾರ್ಥಿಗಳೊಂದಿಗೆ ಬುಧವಾರ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಂಗಳೂರು ತಾಪಂ ಇಒ ಕೆ.ಸಿ ಅಪ್ಪಣ್ಣ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ದ.ಕ ಜಿಪಂ ಸಿಇಒ ಡಾ. ಆನಂದ್, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಲೋಕೇಶ್, ಮಂಗಳೂರು ತಾಪಂ ಸಹಾಯಕ ನಿರ್ದೇಶಕ ಮಹೇಶ್ ಅಂಬೆಕಲ್, ಸಂಪನ್ಮೂಲ ವ್ಯಕ್ತಿಗಳಾದ ತಹಸೀನ್, ಹರಿಪ್ರಸಾದ್ ಶೆಟ್ಟಿ, ಒಆರ್ ಪ್ರಕಾಶ್, ಪ್ರಮೀಳಾ ರಾವ್, ನಿಶ್ಮಿತಾ ಮತ್ತಿತರರು ಉಪಸ್ಥಿತರಿದ್ದರು.