ಸುಳ್ಯ: ಕಾರು ಢಿಕ್ಕಿ; ಬೈಕ್ ಸವಾರ ಮೃತ್ಯು
ಸುಳ್ಯ: ಕಲ್ಲುಗುಂಡಿಯ ದೊಡ್ಡಡ್ಕ ಸಮೀಪ ಬೈಕ್ ಹಾಗೂ ಕಾರು ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಅರಂತೋಡು ಗ್ರಾಮದ ಪಂಚಾಯತ್ ಸದಸ್ಯ ಗಂಗಾಧರ ಎಂಬವರ ಪುತ್ರ ದರ್ಶನ್ ಮೃತರು.
ದರ್ಶನ್ ಅವರು ಮತದಾನ ಮಾಡಲು ಬೆಂಗಳೂರಿನಿಂದ ಆಗಮಿಸುತ್ತಿದ್ದರು. ಇವರು ಮಡಿಕೇರಿ ತನಕ ಬಸ್ ಅಲ್ಲಿ ಬಂದು ನಂತರ ಊರಿನ ಶೇಷಪ ಎಂಬವರ ಪುತ್ರ ಅವಿನ್ ಜೊತೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡ ಅವಿನ್ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story