ನೈರುತ್ಯ ಪದವೀಧರರ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಯಾಗಿ ಶೇಕ್ ಬಾವ ನಾಮಪತ್ರ ಸಲ್ಲಿಕೆ
![ನೈರುತ್ಯ ಪದವೀಧರರ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಯಾಗಿ ಶೇಕ್ ಬಾವ ನಾಮಪತ್ರ ಸಲ್ಲಿಕೆ ನೈರುತ್ಯ ಪದವೀಧರರ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಯಾಗಿ ಶೇಕ್ ಬಾವ ನಾಮಪತ್ರ ಸಲ್ಲಿಕೆ](https://www.varthabharati.in/h-upload/2024/05/15/1266746-15-namapatra-sallike.webp)
ಮಂಗಳೂರು, ಮೇ 15: ಕರ್ನಾಟಕ ವಿಧಾನಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಮಂಗಳೂರಿನ ಶೇಕ್ ಬಾವ ಚುನಾವಣಾಧಿಕಾರಿಯಾಗಿರುವ ಮೈಸೂರು ಉಪ ವಿಭಾಗಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭ ದ.ಕ.ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಧ್ಯಕ್ಷ ಸಿ. ಅಬ್ದುರ್ರಹ್ಮಾನ್ ಮತ್ತಿತರರು ಜೊತೆಗಿದ್ದರು. ಜಿಲ್ಲಾ ಮುಖಂಡ ಕರೀಂ ಕಡಬ, ಜಿಲ್ಲಾ ಮುಸ್ಲಿಂ ಲೀಗ್ ಕೋಶಾಧಿಕಾರಿ ರಿಯಾಝ್ ಹರೇಕಳ, ನೌಶಾದ್ ಮಲಾರ್ ಉಪಸ್ಥಿತರಿದ್ದರು.
Next Story