ಸುರತ್ಕಲ್ ರೇಂಜ್ ಜಂ ಇಯ್ಯತುಲ್ ಮುಲ್ಲಿಮೀನ್ ಮಹಾಸಭೆ: ಅಧ್ಯಕ್ಷರಾಗಿ ಇಸ್ಮಾಯಿಲ್ ದಾರಿಮಿ ಚೊಕ್ಕಬೆಟ್ಟು ಆಯ್ಕೆ
![ಸುರತ್ಕಲ್ ರೇಂಜ್ ಜಂ ಇಯ್ಯತುಲ್ ಮುಲ್ಲಿಮೀನ್ ಮಹಾಸಭೆ: ಅಧ್ಯಕ್ಷರಾಗಿ ಇಸ್ಮಾಯಿಲ್ ದಾರಿಮಿ ಚೊಕ್ಕಬೆಟ್ಟು ಆಯ್ಕೆ ಸುರತ್ಕಲ್ ರೇಂಜ್ ಜಂ ಇಯ್ಯತುಲ್ ಮುಲ್ಲಿಮೀನ್ ಮಹಾಸಭೆ: ಅಧ್ಯಕ್ಷರಾಗಿ ಇಸ್ಮಾಯಿಲ್ ದಾರಿಮಿ ಚೊಕ್ಕಬೆಟ್ಟು ಆಯ್ಕೆ](https://www.varthabharati.in/h-upload/2024/05/15/1266803-img-20240515-wa0003.webp)
ಹಳೆಯಂಗಡಿ: ಸುರತ್ಕಲ್ ರೇಂಜ್ ಜಂ ಇಯ್ಯತುಲ್ ಮುಲ್ಲಿಮೀನ್ ಇದರ ಮಹಾಸಭೆಯು ಬೊಳ್ಳೂರು ಮಸೀದಿ ಸಭಾಂಗಣದಲ್ಲಿ ಮುಫತ್ತಿಶ್ ಉಮರ್ ದಾರಿಮಿ ಸಲ್ಮಾರ ರವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಶೈಖುನಾ ಬೊಳ್ಳೂರು ಉಸ್ತಾದ್ ಅವರು ಉದ್ಘಾಟಿಸಿದರು. ಮುದರ್ರಿಬ್ ಸಿದ್ದೀಕ್ ರಹ್ಮನಿ ಅಡೆಕ್ಕಲ್ ವಿಷಯ ಮಂಡಿಸಿದರು, ಇದೇ ವೇಳೆ 2024-25 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
ಅಧ್ಯಕ್ಷರಾಗಿ ಇಸ್ಮಾಯಿಲ್ ದಾರಿಮಿ ಚೊಕ್ಕಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಖ್ ಮದನಿ ಕಾರ್ನಾಡ್, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ದಾರಿಮಿ ಕಾರ್ನಾಡ್, ಶರೀಫ್ ದಾರಿಮಿ ಅಲ್ ಹೈತಮಿ, ಜೊತೆ ಕಾರ್ಯದರ್ಶಿಗಳಾಗಿ ಇಮ್ರಾನ್ ದಾರಿಮಿ, ಅಬ್ದುಲ್ ಮಜೀದ್ ಆರ್ಶದಿ, ಕೋಶಾಧಿಕಾರಿಯಾಗಿ ಇ.ಎಂ. ಮುಹಮ್ಮದ್ ಹನೀಫ್ ಕೊಲ್ನಾಡು ಆಯ್ಕೆಯಾದರು.
ಐಟಿ ಕೋ.ಓಡಿನೇಟರ್ ಆಗಿ ತ್ವಯ್ಯಿಬ್ ಫೈಝಿ ಬೊಳ್ಳೂರು, ಪರೀಕ್ಷಾ ಬೋರ್ಡ್ ಮುಖ್ಯಸ್ಥರಾಗಿ ರಶೀದ್ ಮುಸ್ಲಿಯಾರ್ ಸಂತಕಟ್ಟೆ, ಕನ್ವೀನರ್ ಆಗಿ ಅಬೂಬಕ್ಕರ್ ಮದನಿ, ಅಬ್ದುಲ್ ನಾಸಿರ್ ಮುಸ್ಲಿಯಾರ್ ಆಯ್ಕೆಯಾದರು.
ಎಸ್ಕೆ ಎಸ್ ಬಿ ವಿ ಚೇರ್ಮ್ಯಾನ್ ಆಗಿ ಅನ್ಸಾರ್ ಅನ್ಸಾರಿ, ಕನ್ವೀನರ್ ಆಗಿ ಹಫೀಝ್ ಅನ್ಸಾರಿ, ಕೋಟ ಉಸ್ತಾದ್ ರಿಲೀಫ್ ಸೆಲ್ಲ್ ಮುಖಂಡರಾಗಿ ಇಮ್ರಾನ್ ಮಕ್ದೂಮಿ, ಶಂಸೀರ್ ಯಾಮಾನಿ, ಕುರುನುಗಳ್ ವಿಭಾಗದ ಮುಖ್ಯಸ್ಥರಾಗಿ ಝೈನುದ್ದೀನ್ ಯಮಾನಿ, ರಶೀಕುದ್ದೀನ್ ಅನ್ಸಾರಿ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ರಝಾಕ್ ಮದನಿ ಸ್ವಾಗತಿಸಿ, ತ್ವಯ್ಯಿಬ್ ಫೈಝಿ ಧನ್ಯವಾದ ಸಮರ್ಪಿಸಿದರು ಎಂದು ಸುರತ್ಕಲ್ ರೇಂಜ್ ಜಂ ಇಯ್ಯತುಲ್ ಮುಲ್ಲಿಮೀನ್ ಪ್ರಕಟನೆ ತಿಳಿಸಿದೆ.