ಸದಾಶಿವ ಸೊರಟೂರು ಕವನ ಸಂಕಲನಕ್ಕೆ ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರ
![ಸದಾಶಿವ ಸೊರಟೂರು ಕವನ ಸಂಕಲನಕ್ಕೆ ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರ ಸದಾಶಿವ ಸೊರಟೂರು ಕವನ ಸಂಕಲನಕ್ಕೆ ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರ](https://www.varthabharati.in/h-upload/2024/06/11/1271516-11-sadashiva-soratoor.webp)
ಮಂಗಳೂರು, ಜೂ.11: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿವರ್ಷ ಅತ್ಯುತ್ತಮ ಕವನ ಸಂಕಲನಕ್ಕೆ ನೀಡುವ 2023ನೇ ಸಾಲಿನ ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರಕ್ಕೆ ದಾವಣಗೆರೆಯ ಸದಾಶಿವ ಸೊರಟೂರು ಅವರ ಱನಿನ್ನ ಬೆರಳು ತಾಕಿ’ ಕವನ ಸಂಕಲನವು ಆಯ್ಕೆಯಾಗಿದೆ. ಪುರಸ್ಕಾರವು 25,000 ರೂ. ನಗದು ಬಹುಮಾನವನ್ನು ಒಳಗೊಂಡಿದ್ದು ನವೆಂಬರ್ನಲ್ಲಿ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೆ. ವಿ. ಕೃಷ್ಣ ಪ್ರಸಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸದಾಶಿವ ಸೊರಟೂರು ವೃತ್ತಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದಾರೆ. ಈವರೆಗೆ ನಾಲ್ಕು ಕವನ ಸಂಕಲನ ಮತ್ತು ಎರಡು ಕಥಾಸಂಕಲನ ಪ್ರಕಟವಾಗಿದೆ. ಱಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ’ ಕವನ ಸಂಕಲನಕ್ಕೆ ಹರಿಹರಶ್ರೀಕಾವ್ಯ ಪ್ರಶಸ್ತಿ. ಱಗಾಯಗೊಂಡ ಸಾಲುಗಳು’ ಕವನ ಸಂಕಲನಕ್ಕೆ ಬಳ್ಳಾರಿಯ ಎನ್ ಗವಿಸಿದ್ದ ಕಾವ್ಯ ಪುರಸ್ಕಾರ ಲಭಿಸಿದೆ. ಱಕೊಲ್ಲುವುದಕ್ಕೆ ಸದ್ದುಗಳಿವೆ’ ಕವನ ಸಂಕನಲದ ಹಸ್ತಪ್ರತಿ ಱಕಾವ್ಯಸಂಜೆ’ಯ ದಶಮಾ ನೋತ್ಸವ ಕಾವ್ಯ ಪುರಸ್ಕಾರ ಲಭಿಸಿದೆ. ಮೊದಲ ಕಥಾಸಂಕಲನ ’ಅರ್ಧ ಬಿಸಿಲು ಅರ್ಧ ಮಳೆ’ ಪುಸ್ತಕಕ್ಕೆ ಧಾರಾವಾಡದ ಭೂಮಿ ಸಾಹಿತ್ಯ ಪ್ರತಿಷ್ಠಾನದ ಕಥಾ ಪುರಸ್ಕಾರ ಮತ್ತು ಕ.ಸಾ.ಪ ದತ್ತಿ ಪ್ರಶಸ್ತಿ ಬಂದಿದೆ. ’ಧ್ಯಾನಕ್ಕೆ ಕೂತ ನದಿ’ ಕಥಾ ಸಂಕಲನವು 2024 ನೇ ಸಾಲಿನ ಈ ಹೊತ್ತಿಗೆ ಕಥಾ ಪ್ರಶಸ್ತಿ ಪಡೆದಿದೆ. ’ಭಂಟಿ’ ಕಥೆಯು ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿ ಪಠ್ಯವಾಗಿದೆ.