ಕಾಂಕ್ರೀಟೀಕರಣ ಮಾಡದೆ ರಸ್ತೆ ಕೆಸರು ಮಯ: ಸ್ಥಳೀಯರ ಆಕ್ರೋಶ
ಉಳ್ಳಾಲ: ಪನೀರ್ ಸಮೀಪದ ಕಾಯರ್ ಪಲಿಕೆಗೆ ಹೋಗುವ ರಸ್ತೆ ಹದಗೆಟ್ಟು ಹೋಗಿದ್ದು, ಹೊಂಡ ಹಾಗೂ ಕೆಸರು ತುಂಬಿದ ರಸ್ತೆಯಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖಾಧಿಕಾರಿಗಳ ಗಮನ ಸೆಳೆದರೂ ಈ ರಸ್ತೆಗೆ ಕಾಂಕ್ರೀಟೀಕರಣ ಮಾಡಲು ಅಧಿಕಾರಿಗಳು, ಜನಪ್ರತಿನಿಧಿಗಳು ಯತ್ನಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಕೆಸರು ತುಂಬಿದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದು ಹಲವು ಮಂದಿ ಗಾಯಗೊಂಡ ಘಟನೆ ಕೂಡ ನಡೆದಿದೆ. ವಿದ್ಯಾರ್ಥಿಗಳಿಗೆ ನಡೆಯಲಾರದ ಪರಿಸ್ಥಿತಿ ಇದೆ. ಈ ಭಾಗದಲ್ಲಿ 50 ಕ್ಕೂ ಹೆಚ್ಚು ಮನೆಗಳಿವೆ. ಈ ಮನೆಮಂದಿಗೆ ಹೊರಗಡೆ ಹೋಗಲು ಆಟೋ ಕೂಡ ಬರಲು ಕೇಳದ ಪರಿಸ್ಥಿತಿ ಇದೆ. ಶಾಲಾ ವಾಹನ ಬಾರದ ಕಾರಣ ವಿದ್ಯಾರ್ಥಿಗಳು ಕೆಲವು ದೂರ ನಡೆಯಬೇಕಾಗಿದೆ. ಕೆಲವು ಬಾರಿ ವಿದ್ಯಾರ್ಥಿಗಳು ಜಾರಿ ಬಿದ್ದು ಕೆಸರಿನ ಬಟ್ಟೆಯಲ್ಲೇ ಶಾಲೆಗೆ ಹೋದದ್ದು ಇದೆ. ಈ ಬಗ್ಗೆ ಶಾಸಕರ, ಕೋಟೆಕಾರ್ ಪಟ್ಟಣ ಪಂಚಾಯತ್ ಗೆ, ಜನಪ್ರತಿನಿಧಿಗಳ ಗಮನ ಸೆಳೆದು ರಸ್ತೆ ಕೂಡಾ ತೋರಿಸಲಾಗಿದೆ. ಆದರೂ ಈವರೆಗೆ ದುರಸ್ತಿ ಆಗಿಲ್ಲ. ಇದರಿಂದ ಇಲ್ಲಿಯ ಜನತೆ ಸಂಕಷ್ಟ ದಿಂದ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಾಯರ್ ಪಲ್ಕೆ ರಸ್ತೆ ನಿರ್ಮಾಣ ಆಗಿ ಕೆಲವು ವರ್ಷಗಳು ಕಳೆದಿವೆ. ಸ್ಥಳೀಯರೇ ಒಟ್ಟು ಸೇರಿ ಈ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆಗೆ ಕಾರಕ್ರೀಟೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ರಸ್ತೆಯ ನಾದುರಸ್ತಿಯಿಂದ ಇಲ್ಲಿನ ಜನತೆ ಎದುರಿಸುತ್ತಿರುವ ತೊಂದರೆಗಳನ್ನು ಮಾಧ್ಯಮದ ಮುಂದೆ ವಿವರಿಸಿದ ಸ್ಥಳೀಯರು ಈ ಬಗ್ಗೆ ಸೂಕ್ತ ಕ್ರಮ ಕೋಟೆಕಾರ್ ಪಟ್ಟಣ ಪಂಚಾಯತ್, ಜನಪ್ರತಿನಿಧಿಗಳು ಕೈಗೊಳ್ಳದೇ ಇದ್ದಲ್ಲಿ ರಸ್ತೆಯಲ್ಲೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭ ಕಾಯರ್ ಪಲ್ಕೆ ನಿವಾಸಿಗಳಾದ ರಹೀಂ, ನಾಗೇಶ್ ಕಾಯರ್ ಪಳಿಕೆ, ಹೇಮಂತ್, ಜಲೀಲ್, ಮುತ್ತಲಿಬ್ ನಝರ್, ರಯೀಫ್, ಲೋಕೇಶ್, ರೇವತಿ , ಪ್ರೀತಿ ಮತ್ತಿತರರು ಉಪಸ್ಥಿತರಿದ್ದರು.