ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು ಶಾಖೆ ವತಿಯಿಂದ "ಇಸ್ಲಾಮಿನ ಮಾಧುರ್ಯ" ಕಾರ್ಯಕ್ರಮ
ಮುಲ್ಕಿ: ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು ಶಾಖೆಯ ವತಿಯಿಂದ "ಇಸ್ಲಾಮಿನ ಮಾಧುರ್ಯ" ಕಾರ್ಯಕ್ರಮವು ಮಂಗಳವಾರ ಶಾಖೆಯ ವಠಾರದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಕೊಲ್ನಾಡು ಶಾಫಿ ಜುಮಾ ಮಸೀದಿಯ ಖತೀಬ್ ಹಾಗೂ ಕೊಲ್ನಾಡು ಶಾಖೆಯ ಉಪಾಧ್ಯಕ್ಷ ಶರೀಫ್ ದಾರಿಮಿ ಅಲ್ ಹೈತಮಿ ಪ್ರಾರ್ಥನೆಯ ಮೂಲಕ ಉದ್ಘಾಟಿಸಿದರು. ಅಧ್ಯಕ್ಷ ಎಂ. ಇಸ್ಮಾಯಿಲ್ ಕೊಲ್ನಾಡು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತ್ವಯ್ಯಿಬ್ ಫೈಝಿ ಬೊಳ್ಳೂರು ಅವರು " ಸಮಾಸ್ತ ನಡೆದು ಬಂದ ಹಾದಿಯ ಕುರಿತು ನೈಜ ಅಹ್ಲುಸ್ಸುನ್ನತ್ ವಲ್ ಜಮಾಅತ್ತಿನ ಆಶಯ ಆದರ್ಶದಲ್ಲಿ ಮುನ್ನಡೆಯಲು ನಾವು ಮಾಡಬೇಕಾದ ಕಾರ್ಯಗಳು" ವಿಷಯದಲ್ಲಿ ಮಾತನಾಡಿದರು.
ಎಸ್ಕೆಎಸ್ಸೆಸ್ಸೆಫ್ ಸುರತ್ಕಲ್ ವಲಯ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಕೆರೆಕಾಡು, ವಲಯ ಮೀಡಿಯಾ ವಿಂಗ್ ಚೇರ್ಮಾನ್ ಕಬೀರ್ ಮುಲ್ಕಿ ಪ್ರಾಸ್ತಾವಿಕ ಮಾತನಾಡಿದರು. ಕೊಲ್ನಾಡು ಶಾಖೆಯ ಪ್ರಧಾನ ಕಾರ್ಯದರ್ಶಿ ರಾಹಿಲ್ ಕೊಲ್ನಾಡು ಸ್ವಾಗತಿಸಿ ಯಾಸಿರ್ ಮಾಸ್ಟರ್ ಧನ್ಯವಾದ ಸಮರ್ಪಿಸಿದರು.
Next Story