ವ್ಯಕ್ತಿ ನಾಪತ್ತೆ

ಮಂಗಳೂರು, ಮೇ 9: ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಅಕ್ಕಿಪೇಟೆಯ ಮೃತ್ಯುಂಜಯ(45) ಊರಿನಿಂದ ಸಂಬಂಧಿಕರೊಂದಿಗೆ ಶೃಂಗೇರಿ, ಧರ್ಮಸ್ಥಳ, ದೇವಸ್ಥಾನಗಳಿಗೆ ಭೇಟಿ ನೀಡಿ ಎಪ್ರಿಲ್ 26 ರಂದು ಸುಬ್ರಹ್ಮಣ್ಯಕ್ಕೆ ಬಂದು ಸುಬ್ರಹ್ಮಣ್ಯದ ನಿಖಿಲ್ ವಸತಿಗೃಹದಲ್ಲಿ ಬಾಡಿಗೆ ರೂಂ ಮಾಡಿ ಎಲ್ಲರೂ ತಂಗಿದ್ದು, ಆ ಸಮಯ ಮೃತ್ಯುಂಜಯರೂಮಿನಿಂದ ಹೊರಗೆ ಬಂದವರು ಕಾಣೆಯಾಗಿದ್ದಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story