Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ದೇರಳಕಟ್ಟೆ: ಕಣಚೂರು ಆಸ್ಪತ್ರೆಯ...

ದೇರಳಕಟ್ಟೆ: ಕಣಚೂರು ಆಸ್ಪತ್ರೆಯ ವೈದ್ಯರಿಂದ ಬಾಲಕನ ಯಶಸ್ವಿ ಶಸ್ತ್ರಚಿಕಿತ್ಸೆ

ವಾರ್ತಾಭಾರತಿವಾರ್ತಾಭಾರತಿ10 May 2025 5:18 PM IST
share
ದೇರಳಕಟ್ಟೆ: ಕಣಚೂರು ಆಸ್ಪತ್ರೆಯ ವೈದ್ಯರಿಂದ ಬಾಲಕನ ಯಶಸ್ವಿ ಶಸ್ತ್ರಚಿಕಿತ್ಸೆ

ಕೊಣಾಜೆ: ಯಂತ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡು ಎಡ ಕೈಯನ್ನು ಕಳೆದುಕೊಳ್ಳುವ ಹಂತದಲ್ಲಿದ್ದ 11 ವರ್ಷದ ಬಾಲಕನ ಕೈಯನ್ನು ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನುರಿತ ವೈದ್ಯಕೀಯ ತಜ್ಞರ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದೆ.‌

ಈ ಕುರಿತು ಶನಿವಾರ ನಾಟೆಕಲ್ ಕಣಚೂರು ಆಸ್ಪತ್ರೆಯ ಸಭಾಂಗಣದಲ್ಲಿ ವೈದ್ಯರ ತಂಡವು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಕಣಚೂರು ಆಸ್ಪತ್ರೆ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಡಾ. ಆಸೀಫ್ ಅವರು ಈ ಬಗ್ಗೆ ಮಾಹಿತಿ ನೀಡಿ , ಚೆನ್ನರಾಯಪಟ್ಟಣದ 11ರ ಹರೆಯದ ಬಾಲಕ, ಫೆ. 26ರಂದು ಹುಲ್ಲು ಕತ್ತರಿಸುವ ಯಂತ್ರದಲ್ಲಿ ಕೈ ಸಿಲುಕಿ ಎಲುಬುಗಳು ತುಂಡಾಗಿ ಸಂಪೂರ್ಣ ಮಾಂಸಖಂಡವೂ ಜಾರಿತ್ತು. ತಕ್ಷಣವೇ ಬಾಲಕನನ್ನು ದೂರದ ಚೆನ್ನರಾಯಪಟ್ಟಣದಿಂದ ನಾಟೆಕಲ್ ನ ಕಣಚೂರು ಆಸ್ಪತ್ರೆಗೆ ಕರೆತರಲಾಗಿತ್ತು. ಕೈ ಭಾಗದಲ್ಲಿದ್ದ ಪ್ರಮುಖ ರಕ್ತನಾಳಕ್ಕೆ ಯಾವುದೇ ಗಾಯಗಳಾಗದೇ ಇದ್ದುದರಿಂದ ರಕ್ತಸ್ರಾವ ಉಂಟಾಗದೇ ಸೂಕ್ತ ಸಮಯದಲ್ಲಿಯೂ ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಗು ತೀವ್ರ ಗಾಯಗಳಿಂದ ತುರ್ತು ಪರಿಸ್ಥಿತಿಯಲ್ಲಿದ್ದರೂ ತಜ್ಞರು ಕೈ ಕತ್ತರಿಸುವ ಬದಲು ಅದನ್ನು ಉಳಿಸುವ ನಿರ್ಧಾರವನ್ನು ತೆಗೆದುಕೊಂಡರು. ಕುಟುಂಬಕ್ಕೆ ಮುಂದಿನ ಚಿಕಿತ್ಸೆಯ ಸವಾಲುಗಳು, ಹಂತ ಹಂತವಾಗಿ ಶಸ್ತ್ರಚಿಕಿತ್ಸೆಗಳು ನಡೆಯಬೇಕಾಗಿರುವುದು, ರಕ್ತ ವರ್ಗಾವಣೆ ಅಗತ್ಯತೆ, ಸೋಂಕು, ತ್ವರಿತ ರಕ್ತಸ್ರಾವ ಮತ್ತು ವಿಫಲತೆಯ ಭೀತಿಗಳು ಮುಂತಾದ ಎಲ್ಲಾ ಅಂಶಗಳನ್ನು ವಿವರಿಸಿ ತಿಳಿಸಿದ ನಂತರ ವೈದ್ಯಕೀಯ ತಂಡದ ಮೇಲೆ ಬಾಲಕನ ಕುಟುಂಬ ನಂಬಿಕೆಯಿಟ್ಟು ಮುಂದೆ ಸಾಗಲು ಒಪ್ಪಿಗೆ ನೀಡಿತು.

ಮೊದಲ ಹಂತದಲ್ಲಿ ಸ್ಥೂಲ ಮುರಿತ ಶಸ್ತ್ರಚಿಕಿತ್ಸೆ ನಡೆಸಲಾಯಿತು. ನಂತರ ನರವಾಹಿನಿ ಹಾಗೂ ರಕ್ತನಾಳದ ಚಿಕಿತ್ಸೆ, ಗಾಯದ ಸ್ವಚ್ಛತೆಗಾಗಿ ಡಿಬ್ರೈಡ್ಮೆಂಟ್ ಮಾಡಲಾಯಿತು. ನಿರಂತರವಾಗಿ ವ್ಯಾಕ್ಯೂಮ್ ಡ್ರೆಸಿಂಗ್‌ಗಳನ್ನು ಬಳಸಿ ಗಾಯವನ್ನು ತೊಳೆಯಲಾಗುತಿತ್ತು.

ಬಳಿಕ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರಿಂದ ಅಬ್ಡೊಮಿನೋಥೊರಾಸಿಕ್ ಫ್ಲ್ಯಾಪ್ ಶಸ್ತ್ರಚಿಕಿತ್ಸೆ ಮೂಲಕ ಜೋಡಣೆ ಮತ್ತು ಎಲುಬಿನ ಮೇಲೆ ಚರ್ಮದ ಕವಚ ನೀಡಲಾಯಿತು. 3 ವಾರಗಳ ಬಳಿಕ ಫ್ಲ್ಯಾಪ್ ಬೇರ್ಪಡಿಸಿ ಮತ್ತೆ ಚರ್ಮದ ಗ್ರಾಫ್ಟ್ ಇಡಲಾಯಿತು. 8 ವಾರಗಳೊಳಗೆ ಗಾಯ ಸಂಪೂರ್ಣ ಗುಣಮುಖವಾಗಿ ಕೈ ಉಳಿಸಲಾಯಿತು.

ಅಷ್ಟೇ ಅಲ್ಲದೆ, ಸೋಂಕು ತಡೆಯಲು ಸೂಕ್ತ ಪ್ರತಿಜೀವಿ ಚಿಕಿತ್ಸೆಗಳು, ನೋವಿನ ನಿಯಂತ್ರಣ ಮತ್ತು ಶುದ್ಧ ಪರಿಸರದ ಮೂಲಕ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಮುಂದಿನ ಹಂತದಲ್ಲಿ 6-8 ತಿಂಗಳ ಒಳಗೆ ಕೈ ಮತ್ತು ಬೆರಳುಗಳ ಚಲನೆ ಪುನಃ ಸ್ಥಾಪಿಸಲು ಟೆಂಡನ್ ಟ್ರಾನ್ಸ್ಫರ್ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗುವುದು ಎಂದರು.

ಕಣಚೂರು ವೈದ್ಯ ವಿಜ್ಞಾನ ಸಂಸ್ಥೆ ಗೌರವ ಸಲಹೆಗಾರ ಡಾ. ಮೊಹಮ್ಮದ್ ಇಸ್ಮಾಯಿಲ್ ಮಾತನಾಡಿ, ಸುದೀರ್ಘ 10 ವರ್ಷಗಳನ್ನು ಪೂರೈಸುತ್ತಿರುವ ಕಣಚೂರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗ ಪರಿಣಾಮಕಾರಿಯಾಗಿ ಕಾರ‍್ಯಾಚರಿಸುತ್ತಿದೆ. ನುರಿತ ವೈದ್ಯರ ತಂಡ ಹಾಗೂ ಅದಕ್ಕೆ ತಕ್ಕುದಾಗಿ ಬೇಕಾದ ಸಲಕರಣೆಗಳ ವ್ಯವಸ್ಥೆಯೂ ಆಸ್ಪತ್ರೆಯಲ್ಲಿದೆ. ಈಗಾಗಲೇ ಅನೇಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರ ತಂಡ ಪ್ರಸ್ತುತ ಪ್ರಕರಣ ಇನ್ನೊಂದು ಮೈಲುಗಲ್ಲು ಸ್ಥಾಪಿಸಿದೆ ಎಂದರು.

ಯಶಸ್ವೀ ಶಸ್ತ್ರಚಿಕಿತ್ಸೆ ಕೈಗೊಂಡ ತಂಡದಲ್ಲಿ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಡಾ.ಆಸಿಫ್, ಅನೆಸ್ತೀಷಿಯಾ ವಿಭಾಗದ ಡಾ. ಅಶ್ವಿನ್, ಡಾ.ವಿನ್ಸೆಂಟ್, ಡಾ.ಲಿಖಿತ್ ರೈ ಭಾಗವಹಿಸಿದ್ದರು.

ಸುದ್ಧಿಗೋಷ್ಠಿಯಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ.ವೆಂಕಟ್ ರಾಯ ಪ್ರಭು, ವೈದ್ಯಕೀಯ ಕಾಲೇಜಿನ ಡೀನ್ ಡಾ.ಶಹನವಾಝ್ ಮಾಣಿಪ್ಪಾಡಿ, ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್, ಡಾ.ಹರೀಶ್ ಶೆಟ್ಟಿ, ಡಾ. ಅಶ್ವಿನ್, ಡಾ.ಹರಣ್ ಮಿತ್ತಲ್ ಮೊದಲಾದವರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X