ಎಲೆಕ್ಟ್ರಿಕ್ ಬಸ್ ಘಟಕ ನಿರ್ಮಾಣಕ್ಕೆ ಜಮೀನು ನೀಡಲು ಸೂಚನೆ
ಫೈಲ್ ಫೋಟೊ
ಮಂಗಳೂರು, ಜೂ.21: ದ.ಕ.ಜಿಲ್ಲೆಯ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗಕ್ಕೆ ಪಿಎಂ ಇ ಬಸ್ ಸೇವಾ ಯೋಜನೆಯಡಿ 100 ಎಲೆಕ್ಟ್ರಿಕ್ ಬಸ್ಗಳ ಘಟಕ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದ.ಕ.ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಈ ಎಲೆಕ್ಟ್ರಿಕ್ ಬಸ್ಗಳು ನಗರದಲ್ಲಿ ಕಾರ್ಯಾಚರಿಸಲು ಪಂಪ್ವೆಲ್ನಲ್ಲಿ ಮಂಗಳೂರು ನಗರ ಪಾಲಿಕೆ ವಶಪಡಿಸಿಕೊಂಡಿರುವ 7 ಎಕರೆ ಜಮೀನನ್ನು ಕೆಎಸ್ಸಾರ್ಟಿಸಿ ನಿಗಮಕ್ಕೆ ಉಚಿತವಾಗಿ ಹಸ್ತಾಂತರಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಈ ಇಲೆಕ್ಟ್ರಿಕಲ್ ಬಸ್ ಘಟಕ ಹಾಗೂ ವಿಭಾಗೀಯ ಕಾರ್ಯಾಗಾರ ನಿರ್ಮಿ ಸಲು ಉಳ್ಳಾಲ ತಾಲೂಕಿನ ಮುಡಿಪುವಿನ ಬಾಳೆಪುಣಿ ಗ್ರಾಮದ ಸರ್ವೆ ನಂ.87ರಲ್ಲಿ 9.90 ಎಕರೆ ಪಂಚಾಯತ್ ಜಮೀನನ್ನು ನಿಗಮಕ್ಕೆ ಉಚಿತವಾಗಿ ನೀಡಲು ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.
Next Story





