ಅಕ್ರಮ ದನ ಸಾಗಾಟ ಪ್ರಕರಣ: ಮೂವರ ಬಂಧನ

ಉಪ್ಪಿನಂಗಡಿ: ಬಾರ್ಯ ಗ್ರಾಮದ ಪಿಲಿಗೂಡು ಎಂಬಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿದ ಘಟನೆ ವರದಿಯಾಗಿದೆ.
ಅಬೂಬಕ್ಕರ್ ಅಲಿಯಾಸ್ ಶಮೀರ್, ಇಮ್ರಾನ್ ಮತ್ತು ಅಕ್ರಮ್ ಬಂಧಿತ ಆರೋಪಿಗಳು. ಈ ಮೂವರು ಪಿಕಪ್ ವಾಹನದಲ್ಲಿ ದನವನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕೃತ್ಯವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಹಾಗೂ 22,000 ರೂ. ಮೌಲ್ಯದ ದನ ಮತ್ತು ಪಿಕಪ್ ವಾಹನವನ್ನು ಉಪ್ಪಿನಂಗಡಿ ಠಾಣೆಯ ತನಿಖಾ ವಿಭಾಗದ ಎಸೈ ಗುರುನಾಥ ಬಿ ಹಾದಿಮನಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
Next Story





