ಪೆರ್ನೆ ವೆಲ್ಫೇರ್ ಅಸೋಸಿಯೇಶನ್ನಿಂದ ಸಿಎ ತೇರ್ಗಡೆ ಹೊಂದಿದ ವಿದ್ಯಾರ್ಥಿಗೆ ಸನ್ಮಾನ

ಮಂಗಳೂರು, ಜು.14: ವೆಲ್ಫೇರ್ ಅಸೋಸಿಯೇಶನ್ ಪೆರ್ನೆ ಇದರ ವತಿಯಿಂದ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿದ ಮುಹಮ್ಮದ್ ಇಯಾಝ್ ಅವರನ್ನು ಪೆರ್ನೆಯಲ್ಲಿ ಸನ್ಮಾನಿಸಲಾಯಿತು.
ಪೆರ್ನೆ ಇಸ್ಮಾಯಿಲ್- ರುಕಿಯಾ ದಂಪತಿಯ ಪುತ್ರನಾಗಿರುವ ಮುಹಮ್ಮದ್ ಇಯಾಝ್ ಯುವಕರಿಗೆ ಸ್ಫೂರ್ತಿಯಾಗಲಿ ಎಂದು ಸಂಸ್ಥೆಯ ಪದಾಧಿಕಾರಿಗಳು ಆಶಿಸಿದರು.
ಈ ಸಂದರ್ಭ ಲತೀಫ್ ಪುರಿಯ, ಆಶ್ರಫ್ ಪಿ.ಎಸ್., ಸಮದ್ ಪೆರ್ನೆ, ಝುಬೈರ್, ಇರ್ಷಾದ್ ಎಸ್.ಎ. ಉಪಸ್ಥಿತರಿದ್ದರು.
Next Story





