ನ.4: ಅಲ್ ಮಾಜಿದಾ ಶರೀಅತ್ ಪದವಿ ಪ್ರದಾನ
ಉಪ್ಪಿನಂಗಡಿ, ನ.3: ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಅಲ್ಹಾಜ್ ಕೆ.ಎಂ.ಖಾಸಿಂ ಮದನಿ ಕರಾಯ ಅವರ ಹಳೆ ವಿದ್ಯಾರ್ಥಿ ಸಂಘಟನೆ ಸಿರಾಜುಲ್ ಫಲಾಹ್ ಅಸೋಸಿಯೇಶನ್ ವತಿಯಿಂದ ತಾಜುಲ್ ಉಲಮಾ, ಶಂಸುಲ್ ಉಲಮಾ ಸಹಿತ ಅಗಲಿದ ಮಹಾತ್ಮರ ಅನುಸ್ಮರಣೆ ಮತ್ತು ಖಿಳ್ರಿಯಾ ಶರೀಅತ್ ಕಾಲೇಜ್ ವಿದ್ಯಾರ್ಥಿನಿಯರಿಗೆ ಅಲ್ ಮಾಜಿದಾ ಪದವಿ ಪ್ರದಾನ ಕಾರ್ಯಕ್ರಮ ನ.4ರಂದು ಬೆಳಗ್ಗೆ 10:30ಕ್ಕೆ ಕರಾಯ ಶರೀಅತ್ ಕಾಲೇಜ್ ವಠಾರದಲ್ಲಿ ನಡೆಯಲಿದೆ.
ಶೈಖುನಾ ಕೆ.ಎಂ.ಖಾಸಿಂ ಮದನಿ ಕರಾಯ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಶೈಖುನಾ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸಲಿದ್ದು ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಲಿದ್ದಾರೆ.
ಸಯ್ಯಿದ್ ಇಸ್ಮಾಯೀಲ್ ತಂಳ್ ಉಜಿರೆ, ಸಯ್ಯಿದ್ ಮಿಹ್ರಾಜ್ ತಂಳ್, ಕೆ.ಎಂ.ಹೈದರ್ ಮದನಿ ಕರಾಯ, ಪಿ.ಎಸ್. ಅಬ್ದುರ್ರಹ್ಮಾನ್ ಮದನಿ, ಅಬೂಸ್ವಾಲಿಹ್ ಉಸ್ತಾದ್ ಪಾಣೆಮಂಗಳೂರು ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.
Next Story





