ಪಡುಪಣಂಬೂರು ಗ್ರಾಮ ಪಂಚಾಯತ್ ಮಟ್ಟದ ವಿಶೇಷ ಆರ್ಥಿಕ ಸೇರ್ಪಡೆ ಅಭಿಯಾನ

ಮಂಗಳೂರು, ಆ.19: ದೇಶವ್ಯಾಪಿ ನಡೆಯುತ್ತಿರುವ ಮೂರು ತಿಂಗಳ ಆರ್ಥಿಕ ಸೇರ್ಪಡೆ ಹಾಗೂ ಜನ ಸುರಕ್ಷಾ ಅಭಿಯಾನದ ಭಾಗವಾಗಿ ಪಡುಪಣಂಬೂರು ಪಂಚಾಯತ್ ವ್ಯಾಪ್ತಿಯ ಕಾರ್ಯಕ್ರಮವನ್ನು ಬೆಂಗಳೂರಿನ ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಜನರಲ್ ಮ್ಯಾನೇಜರ್ ಬಿಸ್ಮಯ್ ಸಮಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತಣಾಡಿದ ಅವರು ಕಾಲಕ್ಕೆ ಸರಿಯಾಗಿ ಬ್ಯಾಂಕ್ ಉಳಿತಾಯ ಖಾತೆಯ ಕೆವೈಸಿ ನವೀಕರಿಸವುದು , ನಾಮನಿರ್ದೇಶನ ಮಾಡುವುದು ನಿರಂತರ ಬ್ಯಾಂಕ್ ಸೌಲಭ್ಯಕ್ಕೆ ಅನುಕೂಲ ಎಂದರು.
ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿ ಜನರಲ್ ಮ್ಯಾನೇಜರ್ ಮಂಜುನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ ಜನ ಸುರಕ್ಷಾ ಯೋಜನೆಗಳು ಬ್ಯಾಂಕ್ ನಲ್ಲಿ ಲಭ್ಯವಿರುವ ಅನೇಕ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಹೇಮಂತ್ ಅಮಿನ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೆನರಾ ಬ್ಯಾಂಕ್ ಡಿಜಿಎಂ ಲತಾ ಕುರುಪು , ಡಿಜಿಎಂ ಕೃಷ್ಣ ಮೋಹನ್ , ಪಂಚಾಯತ್ ಸದಸ್ಯರಾದ ವಿನೋದ್ ಸಾಲ್ಯಾನ್ ಮಾತನಾಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧೀರ್ ಸುರಕ್ಷಾ ಯೋಜನೆಗಳ ಪರಿಪೂರ್ಣತೆ ಸಾಧಿಸಲು ವಿಮಾ ಗ್ರಾಮವಾಗಿ ಘೋಷಿಸಲು ಗ್ರಾಮಸ್ಥರು ಸ್ಥಳೀಯ ಆಡಳಿತ ಹಾಗೂ ಸ್ಥಳೀಯ ಬ್ಯಾಂಕ್ ಗಳ ಜೊತೆ ಸಹಕರಿಸಲು ಮನವಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕವಿತಾ ಎನ್ ಶೆಟ್ಟಿ ಸ್ವಾಗತಿಸಿದರು, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರಾದ ಲತೇಶ್ ಬಿ ಕಾರ್ಯಕ್ರಮ ನಿರೂಪಿಸಿದರು. ಕೆನರಾ ಬ್ಯಾಂಕ್ ಹಳೆಯಂಗಡಿ ಶಾಖಾ ವ್ಯವಸ್ಥಾಪಕ ಅನುಶ್ರೀ ವಂದಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಸಿಬ್ಬಂದಿ ವರ್ಗ, ಕೆನರಾ ಬ್ಯಾಂಕ್, ಎಸ್ ಬಿ ಐ ಸಿಬ್ಬಂದಿಗಳು,ಅಂಗನವಾಡಿ ಆಶಾ ಕಾರ್ಯಕರ್ತೆಯರು, ಸಂಜೀವಿನಿ,ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.







