ರಹ್ಮಾನಿಯಾ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಸೋಮೇಶ್ವರ ಉಚ್ಚಿಲ ವತಿಯಿಂದ ಗಣರಾಜ್ಯೋತ್ಸವ

ಉಳ್ಳಾಲ : ರಹ್ಮಾನಿಯಾ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಸೋಮೇಶ್ವರ ಉಚ್ಚಿಲ ಇದರ ವತಿಯಿಂದ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಯು.ಅಬ್ದುಲ್ ಸಲಾಂ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶಾಲಾ ಪ್ರಾಂಶುಪಾಲ ಸಂದ್ಯಾ ಮೇಡಂ ಅವರ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಮೊಹಸಿನ್ ರಹ್ಮಾನ್, ಹಿದಾಯತುಲ್ಲ, ಕಾರ್ಯದರ್ಶಿ ಸಲಾಂ ಉಚ್ಚಿಲ್, ಬಶೀರ್ ಅಜ್ಜಿನಡ್ಕ, ಕೋಶಾಧಿಕಾರಿ ಅಹ್ಮದ್ ಪೆರಿಬೈಲ್ ಮತ್ತಿತರರು ಉಪಸ್ಥಿತರಿದ್ದರು
ಶಿಕ್ಷಕಿ ಶವೀನ ಸ್ವಾಗತಿಸಿದರು. ಶಿಕ್ಷಕಿ ಅಶ್ವಿನಿ ವಂದಿಸಿದರು.
Next Story