ಇರ್ವತ್ತೂರು ಪದವು: ಯಶಸ್ವಿ ಚಾರಿಟೇಬಲ್ ಟ್ರಸ್ಟ್ಗೆ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ, ಆ.12: ಬಂಟ್ವಾಳ ತಾಲೂಕಿನ ಇರ್ವತ್ತೂರು ಪದವಿನಲ್ಲಿ ಅನಿವಾಸಿ ಉದ್ಯಮಿ ನಾಸಿರ್ ಹುಸೈನ್ ಕಲಾಬಾಗಿಲು, ಸಮಾಜ ಸೇವಕ, ಎಸ್.ಪಿ.ರಫೀಕ್ ಅವರ ಸಾರಥ್ಯದಲ್ಲಿ ಯಶಸ್ವಿ ಚಾರಿಟೇಬಲ್ ಟ್ರಸ್ಟ್(ರಿ)ಗೆ ಚಾಲನೆ ನೀಡಲಾಯಿತು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅರ್ಹರಿಗೆ ನೆರವು ನೀಡುವ ಉದ್ದೇಶದಿಂದ ಯಶಸ್ವಿ ಚಾರಿಟೆಬಲ್ ಟ್ರಸ್ಟ್ ಸ್ಥಾಪಿಸಲಾಗಿದೆ. ಟ್ರಸ್ಟ್ನ ಪ್ರಥಮ ಸಭೆ ಆ.9ರಂದು ಇರ್ವತ್ತೂರಿನ ಎಸ್.ಪಿ.ಕಾಟ್ಟೇಜ್ನಲ್ಲಿ ಬಿ.ಜೆ.ಎಂ ಇರ್ವತ್ತೂರು ಪದವು ಮಸೀದಿಯ ಖತೀಬರಾದ ಉಮರ್ ಮದನಿಯವರ ದುಆ ಮತ್ತು ರಫಿಕ್ ಮದನಿಯವರ ಹಿತವಚನಗಳೊಂದಿಗೆ ನಡೆಯಿತು.
ಸಭೆಯಲ್ಲಿ 2024-2027ರ ಅವಧಿಗೆ ಪ್ರಥಮ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಗಿದ್ದು, ಗೌರವ ಅಧ್ಯಕ್ಷರಾಗಿ ನಾಸಿರ್ ಹುಸೈನ್ ಕಲಾಬಾಗಿಲು, ಗೌರವ ಸಲಹೆಗಾರರಾಗಿ ಅಮೀನ್ ಪಂಜೋಡಿ ಮತ್ತು ಎಸ್.ಪಿ.ಸಲೀಂ, ಅಧ್ಯಕ್ಷರಾಗಿ ಎಸ್.ಪಿ.ರಫೀಕ್, ಉಪಾಧ್ಯಕ್ಷರಾಗಿ ಮುಹಮ್ಮದ್ ಝಹೀರ್, ಫರೀದ್ ಅಹ್ಮದ್ ಎಡ್ತೂರ್, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಕಲಾಬಾಗಿಲು, ಉಪಕಾರ್ಯದರ್ಶಿಯಾಗಿ ನಿಸಾರ್ ಬಿ.ಎಸ್.ನಗರ, ಕೋಶಾಧಿಕಾರಿಯಾಗಿ ನಯಾಝ್ ಕಲಾಬಾಗಿಲು, ಟ್ರಸ್ಟ್ನ ಸದಸ್ಯರಾಗಿ ಅಬ್ದುಲ್ ರಝಾಕ್ ಕಲಾಬಾಗಿಲು, ಸುಲೈಮಾನ್ ಅಗಲೋಡಿ, ಹಾಮದ್ ಅಗಲೋಡಿ, ಹಂಝ ಅಗಲೋಡಿ, ಪಿ.ಎಷ್.ಅಬ್ಬಾಸ್ಇರ್ವತ್ತೂರು ಪದವು, ಅಶ್ರಫ್ ಸುಪಾರಿ ಇರ್ವತ್ತೂರು ಪದವು, ಮನ್ಸೂರ್ ಇರ್ವತ್ತೂರು ಪದವು, ಎಸ್.ಎಮ್.ವಸೀಂ ವಾಮದ ಪದವು, ಝಾಕಿರ್ ಹುಸೈನ್, ನಿಸಾರ್ ಅಹ್ಮದ್ ಮಾಸ್ಟರ್ ಇರ್ವತ್ತೂರು ಪದವು, ಝಹೀರ್ ಇರ್ವತ್ತೂರು ಪದವು, ಅಝರ್ ಪಂಜೋಡಿ, ಝಮೀರ್ ಇರ್ವತ್ತೂರು ಪದವು ಇವರು ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಅನಿವಾಸಿ ಉದ್ಯಮಿ ನಾಸಿರ್ ಕಲಾಬಾಗಿಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದೀಕ್ ಕಲಾಬಾಗಿಲು ಸ್ವಾಗತಿಸಿದರು. ನಿಸಾರ್ ಬಿ.ಎಸ್.ನಗರ ವಂದಿಸಿದರು.







