ಕೊಡಿಯಾಲ್ಬೈಲ್ನಲ್ಲಿ ಕೊಳಚೆ ನೀರು ಸಮಸ್ಯೆ; ಪರಿಶೀಲನೆ ನಡೆಸಿದ ಎಂಎಲ್ಸಿ ಐವನ್ ಡಿಸೋಜಾ, ಶೀಘ್ರ ಕ್ರಮಕ್ಕೆ ಸೂಚನೆ

ಕೊಡಿಯಾಲ್ಗುತ್ತು ವೆಟ್ವೆಲ್ ಕೊಳಚೆ ನೀರು ತೋಡಿಗೆ; ಐವನ್ ಡಿಸೋಜಾ ಭೇಟಿ- ಅಧಿಕಾರಿಗಳೊಂದಿಗೆ ಚರ್ಚೆ
ಮಂಗಳೂರು, ಜ.5: ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಡಿಯಾಲ್ಬೈಲ್ ವಾರ್ಡಿನಲ್ಲಿ ಕೊಡಿಯಾಲ್ಗುತ್ತು ವೆಟ್ವೆಲ್ನಿಂದ ಕೊಳಚೆ ನೀರು ತೋಡುಗಳಲ್ಲಿ ಹರಿಯುತ್ತಿದೆ. ಇದರಿಂದ ಸ್ಥಳೀಯ ಬಾವಿಗಳ ನೀರು ಕಲುಷಿತಗೊಂಡು ದುರ್ನಾತ ಬೀರುತ್ತಿವೆ ಎಂಬ ಸ್ಥಳೀಯ ನಿವಾಸಿಗಳ ದೂರಿನ ಮೇರೆಗೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾರವರು ಭೇಟಿ ನೀಡಿ ಪರಿಶೀಲಿಸಿದರು.
ಈ ಬಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಇದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಪ್ರದೇಶದಲ್ಲಿ ವೆಟ್ವೆಲ್ನಿಂದ ಬರುವಂತಹ ಕೊಳಚೆ ನೀರು ಕುದ್ರೋಳಿ ವೆಟ್ವೆಲ್ ಹೋಗಬೇಕಾಗಿದ್ದು, ಅಲ್ಲಿಯ ಇರತಕ್ಕಂತಹ ಪೈಪ್ಗಳು ಹಳೆಯದಾಗಿರುವುದರಿಂದ ಸದ್ರಿ ಕೊಳಚೆ ನೀರುನ್ನು ಸಾರ್ವಜನಿಕ ತೋಡಿಗೆ ಬಿಟ್ಟಿರುವುದರಿಂದ ಪ್ರದೇಶವು ದುರ್ವಾಸನೆ ಬೀರುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಪ್ಷರಿಣಾಮ ಬೀರುವುದಾಗಿ ಸ್ಥಳೀಯರು ದೂರು ನೀಡಿದ್ದರು. ಅಲ್ಲದೇ ಬಾವಿಗಳ ನೀರು ಕೂಡಾ ಕಲುಷಿತಗೊಡು ಸೊಳ್ಳೆಗಳ ಕಾಟದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಕೂಡಲೇ ಕ್ರಮವಹಿಸುವುದಾಗಿ ಮತ್ತು ಕೊಳಚೆ ನೀರನ್ನು ಪೈಪ್ನ ಮುಖಾಂತರ ಹರಿಯವಂತೆ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.
ಕೊಳಚೆ ನೀರು ಹರಿಸಲು ಮೂರು ಪೈಪ್ಲೈನ್ಗಳಿಗೆ 5 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರವೇ ಕಾಮಗಾರಿಯನ್ನು ಕೈಗೊಳ್ಳ್ಳುವುದಾಗಿ ಇಂಜಿನಿಯರ್ ತಿಳಿಸಿರುವುದಾಗಿ ಐವನ್ ಡಿಸೋಜಾ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ್ ಬಿ ಸಾಲ್ಯಾನ್, ಅನಂತ್ ಕಾಮತ್, ಸಂಜಯ್ ಶೇಟ್, ರಘುರಾಜ್ ಕದ್ರಿ, ದಿನೇಶ್ ಬಲಿಪತೋಟ, ದೇವಿ ಪ್ರಸಾದ್ ಕದ್ರಿ, ಹರೀಶ್ ಕೊಡಿಯಾಲ್ ಬೈಲ್, ಕೇಶವ , ಉಮಾನಾಥ ಗುರಿಕಾರ, ರವಿ ಬಲಿಪತೋಟ, ಶೈಲೇಶ್ ಬಲಿಪತೋಟ, ಸುರೇಶ್ , ಧನಂಜಯ್, ಗಂಗಾಧರ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.







