Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಣಿಪುರದ ದುಸ್ಥಿತಿಗೆ ಆಳುವವರೇ ಹೊಣೆ:...

ಮಣಿಪುರದ ದುಸ್ಥಿತಿಗೆ ಆಳುವವರೇ ಹೊಣೆ: ದು. ಸರಸ್ವತಿ

ವಾರ್ತಾಭಾರತಿವಾರ್ತಾಭಾರತಿ20 Dec 2024 2:29 PM IST
share
ಮಣಿಪುರದ ದುಸ್ಥಿತಿಗೆ ಆಳುವವರೇ ಹೊಣೆ: ದು. ಸರಸ್ವತಿ

ಮಂಗಳೂರು, ಡಿ. 20: ಮಣಿಪುರದ ಕುಕಿಗಳು ಮತ್ತು ಮೈತೇಯಿ ಸಮುದಾಯಗಳನ್ನು ಒಡೆದು ಬೇರ್ಪಡಿಸಿ, ಇದೀಗ ಸಂಧಾನದಕ್ಕೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗಿರುವುದಕ್ಕೆ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರಕಾರವೇ ಹೊಣೆ ಎಂದು ಸಾಮಾಜಿಕ ಕಾರ್ಯಕರ್ತೆ ಡಾ. ದು. ಸರಸ್ವತಿ ಅಭಿಪ್ರಾಯಿಸಿದ್ದಾರೆ.

ಪಿಯುಸಿಎಲ್‌ನ ಕರ್ನಾಟಕ ಘಟಕದಿಂದ ‘ಸಮಕಾಲೀನ ಭಾರತದಲ್ಲಿ ಮಾನವ ಹಕ್ಕುಗಳ ಕಾಳಜಿ’ ಎಂಬ ವಿಷಯದಲ್ಲಿ ಶುಕ್ರವಾರ ನಗರದ ರೋಶನಿ ನಿಲಯದ ಸಭಾಂಗಣದಲ್ಲಿ ಆಯೋಜಿಸಲಾದ ವಿಚಾರಗೋಷ್ಠಿಯಲ್ಲಿ ‘ಮಾನವ ಹಕ್ಕುಗಳಿಗೆ ಸವಾಲಾಗಿರುವ ಮಣಿಪುರದ ಪರಿಸ್ಥಿತಿ’ ಬಗ್ಗೆ ಅವರು ಬೆಳಕು ಚೆಲ್ಲಿದರು.

ಮಣಿಪುರದಲ್ಲಿ ಸಂಭವಿಸಿದ ಸಂಘರ್ಷದ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿ ಅಲ್ಲಿನ ನಿರಾಶ್ರಿತ ಶಿಬಿರ ಸೇರಿದಂತೆ ಈಗಿನ ಸ್ಥಿತಿಗತಿಯ ಬಗ್ಗೆ ಅರಿತುಕೊಂಡಿರುವ ದು. ಸರಸ್ವತಿ,ಅಪಾರವಾದ ಖನಿಜ ಸಂಪತ್ತಿನ ಬೆಟ್ಟಗುಡ್ಡ ಕಣಿವೆ ಪ್ರದೇಶವಾದ ಮಣಿಪುರದಲ್ಲಿ ಕೈಗಾರಿಕೋದ್ಯಮಿಗಳ ಹಿತಾಸಕ್ತಿಗಾಗಿ ಅಲ್ಲಿನ ಭೂಮಿಯನ್ನು ಸ್ಥಿರ ಠೇವಣಿ ತರಹ ಬಳಸುವ ನಿಟ್ಟಿನಲ್ಲಿ ಎರಡು ಸಮುದಾಯಗಳನ್ನು ಬೇರ್ಪಡಿಸುವ ಕಾರ್ಯ ಸ್ವತಹ ಅಲ್ಲಿನ ಆಳುವ ವರ್ಗದಿಂದಲೇ ನಡೆದಿರುವುದು ನೈಜ ಅಂಶ ಎಂದರು.

ಇದಕ್ಕಾಗಿ ಅಲ್ಲಿ ಎರಡು ಸಮುದಾಯಗಳ ನಡುವೆ ಪರಸ್ಪರ ಅಪನಂಬಿಕೆಗಳನ್ನು ಸೃಷ್ಟಿಸಿ ವಿಭಜಿಸುವ ಕಾರ್ಯ ನಡೆಸಲಾಗಿದೆ. ಹಿಂದಿನಿಂದಲೂ ಅಲ್ಲಿನ ಬುಡಕಟ್ಟು ಸಮುದಾಯಗಳ ನಡುವೆ ಸಂಘರ್ಷಗಳು ಸಾಮಾನ್ಯವಾಗಿದ್ದರೂ, ಸಂಧಾನ ಪ್ರಕ್ರಿಯೆ ಮೂಲಕ ಅವುಗಳು ಬಗೆಹರಿಯುತ್ತಿತ್ತು. ಆದರೆ ಈ ಬಾರಿ ಅಲ್ಲಿನ ಕುಕಿ ಜನಾಂಗವನ್ನು ಅವರು ನುಸುಳುಕೋರರು, ಅಫೀಮು ಬೆಳೆದು ಯುವ ಸಮುದಾಯವನ್ನು ನಾಶ ಮಾಡುತ್ತಿರುವ ಜತೆಗೆ ಅರಣ್ಯವನ್ನು ಒತ್ತುವರಿ ಮಾಡಿಕೊಂಡಿದ್ದಾರೆಂಬ ಆರೋಪ ಹೊರಿಸಲಾಗಿದೆ. ಇದನ್ನು ಮೈತೇಯಿ ಸಮುದಾಯ ನಂಬುವ ನಿಟ್ಟಿನಲ್ಲಿ ಅವರಲ್ಲಿ ದ್ವೇಷ ಭಾವನೆಯನ್ನು ತುಂಬಲಾಗಿದೆ. ಬರ್ಮಾದಿಂದ ಲಕ್ಷಾಂತರ ಸಂಖ್ಯೆಯಲ್ಲಿ ನುಸುಳುಕೋರರು ಅಲ್ಲಿಗೆ ಬಂದು ಅರಣ್ಯವನ್ನು ಒತ್ತುವರಿ ಮಾಡಿದ್ದಾರೆ. 400 ಹಳ್ಳಿಗಳು ಜಾಸ್ತಿಯಾಗಿವೆ ಎಂಬುದಾಗಿ ಸ್ವತಹ ಅಲ್ಲಿನ ಮುಖ್ಯಮಂತ್ರಿಯವರೇ ಮಾಡುತ್ತಿರುವ ಆರೋಪದಲ್ಲಿ ಯಾವುದೇ ರೀತಿಯ ಸತ್ಯಾಂಶ ಕಂಡುಬರುತ್ತಿಲ್ಲ. ಅಲ್ಲಿನ ಇತಿಹಾಸ ತಜ್ಞರು, ಸಾಂಸ್ಕೃತಿಕ ಹಿನ್ನೆಲೆ ಬಲ್ಲ ಮೈತೇಯಿಯವರನ್ನು ಮಾತನಾಡಿಸಿದಾಗ ಗರಿಷ್ಟ 10000 ಮಂದಿ ಮ್ಯಾನ್ಮಾರ್ ಬಿಕ್ಕಟ್ಟಿನ ಸಂದರ್ಭ ಪ್ರಾಣ ಉಳಿಸಿಕೊಳ್ಳಲು ಬಂದಿರುವುದನ್ನು ಒಪ್ಪುತ್ತಾರೆ. ಕಣಿವೆಯಂತಿರು ಗುಡ್ಡ ಕಾಡಿನಲ್ಲಿ ಸಣ್ಣ ಕೃಷಿ ಮಾಡುವುದೇ ಕಷ್ಟ ಸಾಧ್ಯವಾಗಿರುವಾಗ ಸಾವಿರಾರು ಎಕರೆ ಒತ್ತುವರಿ ಮಾಡಲು ಸಾಧ್ಯವೇ ಇಲ್ಲ. ಅದಕ್ಕಿಂತಲೂ ಮುಖ್ಯವಾಗಿ ಅಲ್ಲಿರುವ ವಾಸಯೋಗ ಪ್ರದೇಶವೇ ಕಡಿಮೆ. ಆರ್ಥಿಕವಾಗಿ ಕಂಗೆಟ್ಟು ಹೋಗಿರುವ ಜನರನ್ನು ಅಲ್ಲಿ ಅಧಿಕಾರದಲ್ಲಿರುವ ಶಕ್ತಿವಂತರೇ ಅಫೀಮು ಬೆಳೆಗೆ ಪ್ರೇರೇಪಿಸಿರುವುದನ್ನು ಇಲ್ಲವೆನ್ನಲಾಗದು. ಇಂತಹ ಜಾಲವನ್ನು ಅಲ್ಲಿನ ಐಪಿಎಸ್ ಅಧಿಕಾರಿ ಬೃಂದಾ ಅವರೇ ಹೊರಗೆಳೆದು ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇವೆಲ್ಲದರ ನಡುವ ಅಲ್ಲಿ ಆರಂಭದಲ್ಲೇ ಸಂಧಾನದ ಮೂಲಕ ಸಮುದಾಯಗಳ ನಡುವಿನ ವೈರುಧ್ಯವನ್ನು ಬಗೆಹರಿಸುವಲ್ಲಿ ಅಲ್ಲಿನ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ವೈಫಲ್ಯವಾಗಿರುವುದರಿಂದ ಮಣಿಪುರ ಹೊತ್ತಿ ಉರಿಯಬೇಕಾಯಿತು. ಇದೀಗ ನಿರಾಶ್ರಿತ ತಾಣಗಳಲ್ಲಿರುವರರ ಬದುಕು ಎಲ್ಲಾ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಗೆ ಜ್ವಲಂತ ಸಾಕ್ಷಿಯಾಗಿದೆ ಎಂದವರು ಹೇಳಿದರು.

ಶಾಲೆ, ಆಶ್ರಯ ಮಾತ್ರವಲ್ಲದೆ ಪೌಷ್ಟಿಕ ಆಹಾರದಿಂದಲೂ ವಂಚಿತವಾಗಿರುವವರು ಒಂದೆಡೆಯಾದರೆ, ಶಾಲೆ ಹಾಗೂ ಕಾಲೇಜುಗಳಲ್ಲಿ ಇರಬೇಕಾಗಿದ್ದ ಯುವಕರು ಬಂದೂಕು ಹೆಗಲೇರಿಸಿಕೊಂಡು ತಿರುಗುತ್ತಿದ್ದಾರೆ. ಮತ್ತೊಂದೆಡೆ ಮಹಿಳೆಯರು ರಾತ್ರಿ ಹೊತ್ತು ಗಸ್ತು ಕಾಯುವ ಪರಿಸ್ಥಿತಿ ಮಣಿಪುರದಲ್ಲಿ ಕಾಣಬಹುದಾಗಿದೆ. ಶಿಬಿರಗಳಲ್ಲಿ ಯಾವುದೇ ದಾಖಲೆಗಳಿಲ್ಲದೆ ತಮ್ಮ ಅಸ್ತಿತ್ವಕ್ಕಾಗಿ ಪರದಾಡುವವರ ಪರಿಸ್ಥಿತಿಯನ್ನೂ ಹೇಳತೀರದು ಎಂದು ವಿವರ ನೀಡಿದರು.

ಅಲ್ಲಿನ ವಿಭಿನ್ನ ಸಂಸ್ಕೃತಿ, ಆಚರಣೆಯ ಸಮದಾಯಗಳನ್ನು ಒಡೆದಿರುವ ಸರಕಾರ ಬಗ್ಗೆ ನೋವಿದೆ. ಕಣ್ಣಿಗೆ ಕಾಣಿಸುವ ತಾರತಮ್ಯ, ಅಸಮಾನತೆಯ ಮೂಲಕ ಅಲ್ಲಿನ ಜನರನ್ನು ದೇಶದ್ರೋಹಿಗಳನ್ನಾಗಿಸಿರುವ ಸರಕಾರಗಳತ್ತ ಬೆಟ್ಟು ಮಾಡುವ ಜತೆಗೆ ನಮ್ಮ ವೈಫಲ್ಯದ ಬಗ್ಗೆಯೂ ಬೆರಳು ತೋರಿಸಬೇಕಾಗಿದೆ. ಗಡಿ, ರಾಜ್ಯಗಳನ್ನು ಮೀರಿ ದೇಶವಾಗಿ ಇರಲು ಬೇಕಾಗಿರುವ ಆಧಾರ ಬಂಧುತ್ವ. ಈ ಬಂಧುತ್ವವನ್ನು ಬೆಳೆಸುವ ಜವಾಬ್ಧಾರಿಯನ್ನ ಕೇಂದ್ರಹಾಗೂ ರಾಜ್ಯ ಸರಕಾರ ವಹಿಸಿಕೊಂಡು ನಿರಾಶ್ರಿತರ ಶಿಬಿರಗಳಲ್ಲಿ ಇರುವವರ ಮಾನವ ಹಕ್ಕುಗಳನ್ನು ರಕ್ಷಿಸುವತ್ತ ಗಮನ ಹರಿಸಬೇಕಾಗಿದೆ. ಅವರ ನೋವನ್ನು ಸಮಚಿತ್ತದಿಂದ ಆಲಿಸುವ ಕಿವಿಗಳು ಬೇಕಾಗಿವೆ. ಪ್ರತಿರೋಧವಿಲ್ಲದೆ, ಪ್ರಶ್ನೆ ಮಾಡದೆ, ವಾಗ್ವಾದ ಇಲ್ಲದೆ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ಹಾಗಾಗಿ ಬಾಂಧವ್ಯವನ್ನು ಬಂಧುತ್ವದ ಆಧಾರದಲ್ಲಿ ಮಣಿಪುರದಲ್ಲಿ ನೆಲೆಸುವ ನಿಟ್ಟಿನಲ್ಲಿ ಪಿಯುಸಿಎಲ್ ಕೂಡಾ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ದು. ಸರಸ್ವತಿ ಹೇಳಿದರು.

‘ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಶಾಸ್ತ್ರ’ದ ಕುರಿತಂತೆ ಮಾತನಾಡಿದ ರಾಜಕೀ ಶಾಸ್ತ್ರ ತಜ್ಞ ಪ್ರೊ. ವಲೇರಿಯನ್ ರಾಡ್ರಿಗಸ್, 1930-40ರ ಅವಧಿಯಲ್ಲಿ ವಿಶೇಷ ವ್ಯಕ್ತಿತ್ವದ ಡಾ. ಅಂಬೇಡ್ಕರ್ ಅವರಿಂದು ‘ಹಾಟ್ ಸ್ಟಾರ್’ ಆಗಿದ್ದಾರೆ. ಮಾನವ ಹಕ್ಕುಗಳಿಗೆ ಸಂಬಂಧಿಸಿ ಅವರು ಪ್ರಮುಖ ಶಕ್ತಿ ಎನ್ನುವುದು ನನ್ನ ಅಭಿಪ್ರಾಯ ಎಂದರು.

ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆಯಿಂದ ಮಾತ್ರವೇ ಮಾನವ ಹಕ್ಕುಗಳನ್ನು ಪ್ರತಿಪಾದಿಸಲು ಸಾಧ್ಯ ಎಂಬುದು ಡಾ. ಅಂಬೇಡ್ಕರ್ ಅವರ ದಿಟ್ಟ ನಿಲುವು ಆಗಿತ್ತು. ಈ ಹಿನ್ನೆಲೆಯಲ್ಲಿಯೇ ಅಂಬೇಡ್ಕರ್ ಅವರು ಮಾನವರೆಲ್ಲರೂ ಯಾವುದೇ ಧರ್ಮ, ಜಾತಿ, ಲಿಂಗದ ತಾರತಮ್ಯ ಇಲ್ಲದೆ ಸಮಾನತೆ ಹೊಂದುವಲ್ಲಿ ಮೀಸಲಾತಿಯನ್ನು ಪ್ರತಿಪಾದಿಸಿದ್ದರು. ಆದರೆ ಇಂದಿಗೂ ಆ ಸಮಾನತೆಯನ್ನು ದೇಶದಲ್ಲಿ ಕಾಣಲು ಸಾಧ್ಯವಾಗಿಲ್ಲ. ಅದರಿಂದಾಗಿಯೇ ಮಾನವ ಹಕ್ಕುಗಳು ನಿರಂತರವಾಗಿ ಉಲ್ಲಂಘನೆಯಾಗುತ್ತಲೇ ಸಾಗುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆಯ ಜತೆಗೆ ಪ್ರಸಕ್ತ ಸನ್ನಿವೇಶಗಳಲ್ಲಿ ಪರಿಸರದ ಅಸಮತೋಲವೂ ಇಂದಿನ ದಿನಗಳಲ್ಲಿ ಪ್ರಮುಖ ಚರ್ಚಿತ ವಿಷಯವಾಗಿದೆ. ಹವಾಮಾನ ವೈಪರೀತ್ಯದ ಕುರಿತಂತೆ ಪರಿಸರಾಕ್ತರಿಂದ ಆತಂಕದ ಜತೆಗೆ ವನ್ಯಜೀವಿಗಳ ಹಕ್ಕುಗಳ ಬಗ್ಗೆಯೂ ಚರ್ಚೆಯಾಗುತ್ತಿದೆ ಎಂದು ಹೇಳಿದ ಅವರು, ಮಂಗಳೂರಿನಲ್ಲಿಯೂ ಮಿತಿಮೀರಿದ ವಾಹನಗಳಿಂದಾಗಿ ಆಗುತ್ತಿರುವ ತೊಂದರೆಗಳ ಬಗ್ಗೆ ಸ್ಥಳೀಯಾಡಳಿತ ಗಮನ ಹರಿಸುವ ಅಗತ್ಯವಿದೆ ಎಂದೂ ಅವರು ಸಲಹೆ ನೀಡಿದರು.

ರೋಶನಿ ನಿಲಯದ ಸಿ. ಪ್ರೊ. ಎಲ್ಸಿನ್ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿಯುಸಿಎಲ್‌ನ ರಾಜ್ಯ ಘಟಕದ ಅಧ್ಯಕ್ಷ ಅರವಿಂದ ನರೈನ್, ಸಮಾಜದಲ್ಲಿ ಎಲ್ಲರ ಮಾನವ ಹಕ್ಕುಗಳು ಮುಖ್ಯ ಎಂಬ ದೃಷ್ಟಿಕೋನದೊಂದಿಗೆ 1975ರಲ್ಲಿ ಸ್ಥಾಪಿಸಲ್ಪಟ್ಟ ಪಿಯುಸಿಎಲ್ ಮಲ ಹೊರುವ ಪದ್ಧತಿ ಬಗ್ಗೆ, ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ಸಂದರ್ಭ ನಡೆದ ಪಬ್‌ದಾಳಿ, ಹಿಜಾಬ್ ಪ್ರಕರಣದ ಕುರಿತಂತೆ ಸತ್ಯಶೋಧನೆಯನ್ನು ನಡೆಸಿದೆ ಎಂದರು.

ಟಿ.ಆರ್. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X