ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣ: ಹರ್ಯಾಣ ಶಾಸಕ ಗೋಪಾಲ್ ಕಾಂಡಾ ಆರೋಪ ಮುಕ್ತ
ಹೊಸದಿಲ್ಲಿ:ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಹರ್ಯಾಣದ ಮಾಜಿ ಸಚಿವ, ಸಿರ್ಸಾ ಶಾಸಕ, ಹರ್ಯಾಣ ಲೋಕಹಿತ್ ಪಕ್ಷದ ಮುಖ್ಯಸ್ಥ ಗೋಪಾಲ್ ಗೋಯಲ್ ಕಾಂಡಾ ಅವರನ್ನು ದಿಲ್ಲಿಯ ರೂಸ್ ಅವೆನ್ಯೂ ಕೋರ್ಟ್ ಮಂಗಳವಾರ ಖುಲಾಸೆಗೊಳಿಸಿದೆ.
ಈ ಹಿಂದೆ ಕಾಂಡದ ಎಂಡಿಎಲ್ಆರ್ ಏರ್ ಲೈನ್ಸ್ ನಲ್ಲಿ ಉದ್ಯೋಗಿಯಾಗಿದ್ದ 23ರ ಹರೆಯದ ಮಾಜಿ ಗಗನಸಖಿ ಗೀತಿಕಾ ಅವರು ಆಗಸ್ಟ್ 5, 2012 ರಂದು ವಾಯುವ್ಯ ದಿಲ್ಲಿಯ ಅಶೋಕ್ ವಿಹಾರ್ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.
ಆತ್ಮಹತ್ಯೆಗೆ ಪ್ರಚೋದನೆ, ಕ್ರಿಮಿನಲ್ ಬೆದರಿಕೆ ಹಾಗೂ ಕ್ರಿಮಿನಲ್ ಪಿತೂರಿಯ ಆರೋಪದ ಮೇಲೆ ಹರ್ಯಾಣದ ಮಾಜಿ ಗೃಹ ವ್ಯವಹಾರಗಳ ರಾಜ್ಯ ಸಚಿವ ವಿರುದ್ಧ ಪ್ರಕರಣ ದಾಖಲಾಗಿತ್ತು. ಗೀತಿಕಾ ಶರ್ಮಾ ಅವರು ತಮ್ಮ ಆತ್ಮಹತ್ಯಾ ಟಿಪ್ಪಣಿಯಲ್ಲಿ ಸಿರ್ಸಾ ಶಾಸಕ ಗೋಪಾಲ್ ಕಾಂಡ ಹಾಗೂ ಎಚ್ ಆರ್ ಮ್ಯಾನೇಜರ್ ಅರುಣಾ ಚಡ್ಡಾ ತನ್ನ ಸಾವಿಗೆ ಕಾರಣ ಎಂದು ಬರೆದಿದ್ದರು . ಭಾರತ್ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಗೋಪಾಲ್ ನನ್ನು ಆಗಸ್ಟ್ 2.2012ರಲ್ಲಿ ಬಂಧಿಸಲಾಗಿತ್ತು. ಬಳಿಕ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿತ್ತು.