ಅಮರಾವತಿ ಆಂಧ್ರಪ್ರದೇಶದ ಏಕೈಕ ರಾಜಧಾನಿ : ನಾಯ್ಡು
![ಅಮರಾವತಿ ಆಂಧ್ರಪ್ರದೇಶದ ಏಕೈಕ ರಾಜಧಾನಿ : ನಾಯ್ಡು ಅಮರಾವತಿ ಆಂಧ್ರಪ್ರದೇಶದ ಏಕೈಕ ರಾಜಧಾನಿ : ನಾಯ್ಡು](https://www.varthabharati.in/h-upload/2024/06/11/1271523-chandra-babu-naidu-2024-06-6dd98794fe280844a247c9f7dac0e581-3x2.webp)
ಎನ್.ಚಂದ್ರಬಾಬು ನಾಯ್ಡು | PC : PTI
ಅಮರಾವತಿ : ಅಮರಾವತಿ ರಾಜ್ಯದ ಏಕೈಕ ರಾಜಧಾನಿಯಾಗಲಿದೆ ಎಂದು ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮಂಗಳವಾರ ಪ್ರಕಟಿಸಿದರು.
ಟಿಡಿಪಿ,ಬಿಜೆಪಿ ಮತ್ತು ಜನಸೇನಾ ಶಾಸಕರ ಜಂಟಿ ಸಭೆಯಲ್ಲಿ ಇದನ್ನು ಘೋಷಿಸಿದ ನಾಯ್ಡು,‘ನಮ್ಮ ಸರಕಾರದಲ್ಲಿ ಮೂರು ರಾಜಧಾನಿಗಳ ಸೋಗಿನಲ್ಲಿ ಯಾವುದೇ ಗಿಮಿಕ್ ಇರುವುದಿಲ್ಲ. ನಮ್ಮ ರಾಜಧಾನಿ ಅಮರಾವತಿ’ ಎಂದು ಒತ್ತಿ ಹೇಳಿದರು.
2014-19ರ ನಡುವೆ ವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ನಾಯ್ಡು ಅಮರಾವತಿಯನ್ನು ರಾಜಧಾನಿ ನಗರವನ್ನಾಗಿಸುವ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದರು. ಆದರೆ 2019ರ ಚುನಾವಣೆಯಲ್ಲಿ ಟಿಡಿಪಿ ಅಧಿಕಾರ ಕಳೆದುಕೊಂಡು ವೈ.ಎಸ್.ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ ಭರ್ಜರಿ ಗೆಲುವನ್ನು ಸಾಧಿಸಿದಾಗ ನಾಯ್ಡು ಅವರ ಕನಸಿಗೆ ಹಿನ್ನಡೆಯಾಗಿತ್ತು.
ಅಮರಾವತಿಯನ್ನು ರಾಜಧಾನಿ ನಗರವನ್ನಾಗಿಸುವ ಯೋಜನೆಗೆ ತಣ್ಣೀರೆರಚಿದ್ದ ರೆಡ್ಡಿ ಮೂರು ರಾಜಧಾನಿಗಳ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು.
Next Story