ಒಡಿಶಾ | ಲಂಚಕ್ಕೆ ಬೇಡಿಕೆ : ED ಉಪ ನಿರ್ದೇಶಕನನ್ನು ಬಂಧಿಸಿದ ಸಿಬಿಐ

ಭುವನೇಶ್ವರ : ಒಡಿಶಾದಲ್ಲಿ ಲಂಚ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಚಿಂತನ್ ರಘುವಂಶಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ .
ಭುವನೇಶ್ವರ ಮೂಲದ ಗಣಿ ಉದ್ಯಮಿಯೋರ್ವರ ಬಳಿ 20 ಲಕ್ಷ ರೂ. ಲಂಚ ನೀಡುವಂತೆ ಚಿಂತನ್ ರಘುವಂಶಿ ಬೇಡಿಕೆ ಇಟ್ಟಿದ್ದರು. ಈ ಕುರಿತ ಖಚಿತ ಮಾಹಿತಿಯ ಮೇರೆಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರಕರಣದಲ್ಲಿ 2013ರ ಬ್ಯಾಚ್ನ ಐಆರ್ಎಸ್ ಅಧಿಕಾರಿಯಾಗಿರುವ ರಘುವಂಶಿ ಅವರನ್ನು ವಿಚಾರಣೆ ಬಳಿಕ ಬಂಧಿಸಿರುವುದಾಗಿ ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story





