Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ್ರೇಯಸಿಯನ್ನು ಅರಸಿ ದೇಶ ತೊರೆದ ಮಾಜಿ...

ಪ್ರೇಯಸಿಯನ್ನು ಅರಸಿ ದೇಶ ತೊರೆದ ಮಾಜಿ ಕ್ರಿಕೆಟರ್ ಈಗ ಕೋಟ್ಯಾಧಿಪತಿ !

ವಾರ್ತಾಭಾರತಿವಾರ್ತಾಭಾರತಿ11 Jan 2025 12:36 PM IST
share
ಪ್ರೇಯಸಿಯನ್ನು ಅರಸಿ ದೇಶ ತೊರೆದ ಮಾಜಿ ಕ್ರಿಕೆಟರ್ ಈಗ ಕೋಟ್ಯಾಧಿಪತಿ !

ಚೆನ್ನೈ: ಭಾರತದ ಮಾಜಿ ಕ್ರಿಕೆಟಿಗರೊಬ್ಬರು ಪ್ರೀತಿಗಾಗಿ ವೃತ್ತಿಜೀವನ ಮತ್ತು ದೇಶವನ್ನೇ ತೊರೆದು ದಕ್ಷಿಣ ಆಫ್ರಿಕಾಗೆ ತೆರಳಿ ಅಲ್ಲಿ ನಿಷೇಧಕ್ಕೊಳಗಾದರೂ ಧೈರ್ಯಗೆಡದೇ ಛಲದಿಂದ ಬದುಕು ಕಟ್ಟಿಕೊಂಡು ಈಗ ಕೋಟ್ಯಾಧಿಪತಿಯಾಗಿರುವ ಸ್ವಾರಸ್ಯಕರ ಪ್ರಸಂಗ ಬೆಳಕಿಗೆ ಬಂದಿದೆ.

ಭಾರತೀಯ ಕ್ರಿಕೆಟ್‍ನಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ಶರ್ಮಿಳಾ ಠಾಕೂರ್ ಅವರನ್ನು ಪ್ರೀತಿಸಿ ವಿವಾಹವಾದದ್ದು, ಸೌರವ್ ಗಂಗೂಲಿ ಬಾಲ್ಯದ ಸ್ನೇಹಿತೆಗೆ ತಾಳಿ ಕಟ್ಟಿದ್ದು, ಸಚಿನ್ ತೆಂಡೂಲ್ಕರ್- ಅಂಜಲಿ, ಕೊಹ್ಲಿ-ಅನುಷ್ಕಾ ಶರ್ಮಾ ಪ್ರೇಮ ಹೀಗೆ ಹಲವು ಕಥೆಗಳು ಇದ್ದರೂ, ತಮಿಳುನಾಡಿನ ಮಹಾಲಿಂಗಮ್ ವೆಂಕಟೇಶನ್ ಅವರ ಪ್ರಣಯ ಪ್ರಸಂಗಕ್ಕೆ ಹೋಲಿಸಿದರೆ ಪೇಲವ ಎನಿಸುತ್ತವೆ.

1970 ಹಾಗೂ 1980ರ ದಶಕದಲ್ಲಿ ದೇಶಿ ಕ್ರಿಕೆಟ್‍ನಲ್ಲಿ ಪ್ರಮುಖ ಹೆಸರಾಗಿದ್ದ ಮಹಾಲಿಂಗಮ್, ಜೀವನದಲ್ಲಿ ರಿಸ್ಕ್ ತೆಗೆದುಕೊಂಡ ಘಟನೆ ಅವರ ಜೀವನವನ್ನೇ ಬದಲಿಸಿತು. ಪ್ರಥಮದರ್ಜೆ ಹಾಗೂ ಡಿವಿಷನ್ ಲೀಗ್ ಪಂದ್ಯಗಳಲ್ಲಿ ಇಂಡಿಯಾ ಸಿಮೆಂಟ್ಸ್, ಎಸ್‍ಬಿಐ ತಂಡಗಳಿಗೆ ಸೈಯ್ಯದ್ ಕೀರ್ಮಾನಿ,, ಮೊಹಿಂದರ್ ಅಮರ್‍ನಾಥ್ ಜತೆಗೂ ಮಹಾಲಿಂಗಮ್ ಆಡಿದ್ದರು.

ಆದರೆ ಪ್ರೇಮದ ಬಲೆಯಲ್ಲಿ ಬಿದ್ದ ಇವರ ಬದುಕು ಅನಿರೀಕ್ಷಿತ ತಿರುವು ಪಡೆಯಿತು. "ನಾನು ಪತ್ನಿ ಪ್ರಿಸಿಲ್ಲ ಅವರನ್ನು 1983ರಲ್ಲಿ ಆಕೆ ಭಾರತಕ್ಕೆ ಬಂದಿದ್ದಾಗ ಭೇಟಿ ಮಾಡಿದ್ದೆ. ಆಕೆಯನ್ನು ಅರಸಿ ದಕ್ಷಿಣ ಆಫ್ರಿಕಾಗೆ ತೆರಳಿದೆ. ಆಗ ಆಫ್ರಿಕಾಗೆ ಪ್ರಯಾಣ ಸುಲಭವಿರಲಿಲ್ಲ. ಭಾರತ ಸರ್ಕಾರದಿಂದ ವಿಶೇಷ ಅನುಮತಿ ಪಡೆದು, ಸಂಬಂಧಿಕರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದಾಗಿ ಹೇಳಿದ್ದೆ. ದರ್ಬಾನ್‍ನಲ್ಲಿ ಇಳಿದು ಇಲ್ಲಿರುವುದಾಗಿ ಕರೆ ಮಾಡಿ ಆಕೆಗೆ ತಿಳಿಸಿದೆ. ಆಕೆಗೆ ನಂಬಲೂ ಸಾಧ್ಯವಾಗಲಿಲ್ಲ" ಎಂದು ಸ್ವಾರಸ್ಯಕರ ಕಥೆ ಬಿಚ್ಚಿಟ್ಟರು.

ಬಳಿಕ ನಮ್ಮ ವಿವಾಹವಾಯಿತು. ಇದೀಗ ನಮ್ಮ ವೈವಾಹಿಕ ಸಂಬಂಧಕ್ಕೆ 38 ವರ್ಷ ತುಂಬಿದೆ ಎಂದು ವಿವರಿಸಿದರು. ದಕ್ಷಿಣ ಆಫ್ರಿಕಾದಲ್ಲೂ ಮಹಾಲಿಂಗಮ್ ಮುರಳಿ ಹೆಸರಿನಿಂದ ಎನ್‍ಸಿಬಿ ಪರವಾಗಿ ಕೆಲ ಪಂದ್ಯಗಳನ್ನು ಆಡಿದರು. ಆದರೆ ವೀಸಾ ಸಮಸ್ಯೆಯಿಂದಾಗಿ ಅವರ ಕ್ರೀಡಾಭವಿಷ್ಯ ಮುಸುಕಾಯಿತು. ಇದೇ ಸಂದರ್ಭದಲ್ಲಿ ಅಪಘಾತವೊಂದರಲ್ಲಿ ಗಾಯಗೊಂಡು ಕ್ರೀಡಾಜೀವನಕ್ಕೆ ಧಕ್ಕೆ ಉಂಟಾಯಿತು.

ಬಳಿಕ ರೆಸ್ಟೋರೆಂಟ್ ವಹಿವಾಟಿಗೆ ಧುಮುಕಿದ ಮಾಲಿ ಇದೀಗ ಕೋಟ್ಯಧಿಪತಿ. 24 ವರ್ಷದಿಂದ ಹೊಟೆಲ್ ವ್ಯವಹಾರ ನಡೆಸುತ್ತಿರುವ 70 ವರ್ಷದ ಮಹಾಲಿಂಗಮ್‍ಗೆ ಈಗ ಇಬ್ಬರು ಪುತ್ರರಿದ್ದಾರೆ. ಮೂರು ರೆಸ್ಟೋರೆಂಟ್‍ಗಳ ಮಾಲಕರಾಗಿರುವ ಇವರ ಆಸ್ತಿ ಮೌಲ್ಯ ಇದೀಗ ಒಂದು ಕೋಟಿ ರೂಪಾಯಿ ದಾಟಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X