ತೆಲಂಗಾಣದ ಔಷಧ ಘಟಕದಲ್ಲಿ ಸ್ಫೋಟ | 7 ಮಂದಿ ಸಾವು, ಹಲವರಿಗೆ ಗಾಯ
![ತೆಲಂಗಾಣದ ಔಷಧ ಘಟಕದಲ್ಲಿ ಸ್ಫೋಟ | 7 ಮಂದಿ ಸಾವು, ಹಲವರಿಗೆ ಗಾಯ ತೆಲಂಗಾಣದ ಔಷಧ ಘಟಕದಲ್ಲಿ ಸ್ಫೋಟ | 7 ಮಂದಿ ಸಾವು, ಹಲವರಿಗೆ ಗಾಯ](https://www.varthabharati.in/h-upload/2024/04/03/1258285-26.webp)
Photo: X \ @PintodeepakD
ಹೈದರಾಬಾದ್ : ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಹಾತ್ನೂರ ಮಂಡಲ್ನ ಚಂದ್ಲಾಪುರ ಗ್ರಾಮದಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಬುಧವಾರ ಸ್ಫೋಟ ಸಂಭವಿಸಿ ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ
‘‘ಔಷಧ ಕಂಪೆನಿಯಲ್ಲಿ ಸಂಜೆ 5 ಗಂಟೆಗೆ ರಿಯಾಕ್ಟರ್ ಸ್ಫೋಟಗೊಂಡಿತು. ಇದರಿಂದ ಕನಿಷ್ಠ 7 ಮಂದಿ ಮೃತಪಟ್ಟರು. ಕನಿಷ್ಠ 15ರಿಂದ 20 ಮಂದಿ ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ವರ್ಗಾಯಿಸಲಾಗಿದೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಸಮೀಪ ಇದ್ದ ಹಲವು ಕಟಡ್ಟಗಳಿಗೆ ಕೂಡ ಹಾನಿ ಉಂಟಾಗಿವೆ ಎಂದು ಅವರು ತಿಳಿಸಿದ್ದಾರೆ.
Reactor blast in a chemical company in Sangareddy district, #Telangana. 4 bodies recovered, 10 suffered third degree burns.
— Pinto Deepak (@PintodeepakD) April 3, 2024
Five fire tenders on the spot. Rescue ops underway.@TOIHyderabad @spsangareddy @Collector_SRD @TelanganaFire pic.twitter.com/4rB2rNBI40