Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವನ್ಯಜೀವಿಗಳ ಗೋಪ್ಯ ಮಾಹಿತಿಗಳು ವಾಟ್ಸ್...

ವನ್ಯಜೀವಿಗಳ ಗೋಪ್ಯ ಮಾಹಿತಿಗಳು ವಾಟ್ಸ್ ಆ್ಯಪ್ ನಲ್ಲಿ ಸೋರಿಕೆ : ಮುಜುಗರಕ್ಕೀಡಾದ ಮಧ್ಯಪ್ರದೇಶ ಅರಣ್ಯ ಇಲಾಖೆ

ಅರಣ್ಯ ಇಲಾಖೆಯಲ್ಲಿರುವ ನೌಕರರ ಅತೀ ಉತ್ಸಾಹಕ್ಕೆ ಬಲಿಯಾಗುತ್ತಿರುವ ವನ್ಯಜೀವಿಗಳು!

ವಾರ್ತಾಭಾರತಿವಾರ್ತಾಭಾರತಿ29 Nov 2024 8:29 PM IST
share
ವನ್ಯಜೀವಿಗಳ ಗೋಪ್ಯ ಮಾಹಿತಿಗಳು ವಾಟ್ಸ್ ಆ್ಯಪ್ ನಲ್ಲಿ ಸೋರಿಕೆ : ಮುಜುಗರಕ್ಕೀಡಾದ ಮಧ್ಯಪ್ರದೇಶ ಅರಣ್ಯ ಇಲಾಖೆ

ಭೋಪಾಲ್: ಮಧ್ಯಪ್ರದೇಶ ಅರಣ್ಯ ಇಲಾಖೆ ಈಗಾಗಲೇ ಆನೆಗಳು, ಚೀತಾಗಳು, ಹುಲಿಗಳು ಹಾಗೂ ಇನ್ನಿತರ ವನ್ಯಜೀವಿಗಳನ್ನು ನಿಭಾಯಿಸುವ ಸಂಕೀರ್ಣ ಸವಾಲಿನಿಂದ ಹೈರಾಣಾಗಿದ್ದು, ಇದರೊಂದಿಗೆ, ವನ್ಯಜೀವಿಗಳ ಚಲನವಲನ, ವೈಯಕ್ತಿಕ ವಿವರಗಳ ಗೋಪ್ಯ ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗುತ್ತಿರುವುದರಿಂದ ಮತ್ತಷ್ಟು ಮುಜುಗರಕ್ಕೀಡಾಗಿದೆ.

ವನ್ಯಜೀವಿಗಳ ಊಹಿಸಲಾಗದ ಸ್ವಭಾವಗಳನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ಅರಣ್ಯ ಇಲಾಖೆಗೆ ವಹಿಸಲಾಗಿದ್ದು, ಇದರೊಂದಿಗೆ ತೀವ್ರ ಚಂಚಲ ಪ್ರಪಂಚವಾದ ವಾಟ್ಸ್ ಆ್ಯಪ್ ಗುಂಪುಗಳ ಮೇಲೂ ಕಣ್ಣಿಡಬೇಕಾದ ಒತ್ತಡಕ್ಕೆ ಅರಣ್ಯ ಇಲಾಖೆ ಗುರಿಯಾಗಿದೆ. ಮರಣೋತ್ತರ ಪರೀಕ್ಷಾ ವರದಿಗಳು, ತನಿಖಾ ವಿವರಗಳು, ವನ್ಯಜೀವಿಗಳ ಚಲನವಲನಗಳ ಮಾಹಿತಿ ಸೇರಿದಂತೆ ಇಲಾಖೆಯ ಸೂಕ್ಷ್ಮ ದಾಖಲೆಗಳು ಸಾರ್ವಜನಿಕಗೊಳ್ಳತೊಡಗಿವೆ. ಇದಕ್ಕೆ ಇಲಾಖೆಯಲ್ಲಿರುವ ಅತಿ ಉತ್ಸಾಹಭರಿತ ನೌಕರರು ಕಾರಣ ಎನ್ನಲಾಗಿದೆ!

ಕುತೂಹಲಕರ ಸಂಗತಿಯೆಂದರೆ, ತಮ್ಮ ವರ್ಗಾವಣೆಗೂ ಒಂದು ದಿನ ಮುಂಚೆ ಇಂತಹ ಸೋರಿಕೆಯನ್ನು ತಡೆಗಟ್ಟಲು ಕಠಿಣ ಶಬ್ದಗಳನ್ನೊಳಗೊಂಡ ನಿರ್ದೇಶನ ನೀಡಿದ್ದ ವನ್ಯಜೀವಿ ವಾರ್ಡನ್ ವಿ.ಎನ್.ಅಂಬಾಡೆಯವರ ಪತ್ರ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿದೆ.

ಇಲಾಖೆಯ ಗೋಪ್ಯ ಸಂವಹನವಾಗಿ ಉಳಿಯಬೇಕಿದ್ದ ಸೋರಿಕೆಯಾಗಿರುವ ಪತ್ರವು, ಅನಧಿಕೃತ ದಾಖಲೆಗಳ ಸೋರಿಕೆಯಲ್ಲಿ ಆಗುತ್ತಿರುವ ಏರಿಕೆ ಕುರಿತು ಅಂಬಾಡೆ ವ್ಯಕ್ತಪಡಿಸಿರುವ ಕಳವಳದ ಭಾಗವಾಗಿದೆ. ಈ ಮಹತ್ವದ ದಾಖಲೆಗಳು ಭೋಪಾಲ್ ಅರಣ್ಯ ವೃತ್ತದಿಂದ ಕಳವಾಗಿದ್ದ ಹುಲಿಯ ಮರಣೋತ್ತರ ಪರೀಕ್ಷಾ ವರದಿ ಹಾಗೂ ಬಾಂಧವ್ ಗಢ್ ಹುಲಿ ಸಂರಕ್ಷಿತಾರಣ್ಯದಲ್ಲಿ ಸಾವನ್ನಪ್ಪಿದ್ದ ಆನೆಗಳಿಗೆ ಸಂಬಂಧಿಸಿದ ವರದಿಗಳಾಗಿವೆ. ಈ ಪತ್ರವನ್ನು ವನ್ಯಜೀವಿಗಳ ನಿರ್ವಹಣೆಯಲ್ಲಿ ಭಾಗಿಯಾಗಿರುವ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇನ್ನಿತರ ಸಿಬ್ಬಂದಿಗಳಿಗೆ ಎಚ್ಚರಿಕೆಯನ್ನಾಗಿ ರವಾನಿಸಲಾಗಿತ್ತು ಹಾಗೂ ಸೂಕ್ತ ಅನುಮತಿ ಇಲ್ಲದೆ ಇಂತಹ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳುವುದರಿಂದ ದೂರ ಉಳಿಯಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿತ್ತು.

ಈ ವಾಟ್ಸ್ ಆ್ಯಪ್ ಗುಂಪುಗಳ ಪೈಕಿ ಕೆಲವು ಗುಂಪುಗಳಲ್ಲಿ ಸರಕಾರೇತರ ಸಂಸ್ಥೆಗಳ ಸದಸ್ಯರು ಹಾಗೂ ಭದ್ರತಾ ಸಿಬ್ಬಂದಿಗಳನ್ನು ಸೇರ್ಪಡೆ ಮಾಡಿದ್ದುದರಿಂದ ಪರಿಸ್ಥಿತಿ ಮತ್ತಷ್ಟು ಆತಂಕಕಾರಿ ಸ್ವರೂಪಕ್ಕೆ ತಿರುಗಿದೆ. ಇಂತಹ ಸೂಕ್ಷ್ಮ ಮಾಹಿತಿಗಳನ್ನು ನಿರ್ಲಕ್ಷ್ಯ ಅಥವಾ ದುರುದ್ದೇಶದಿಂದ ಹಂಚಿಕೊಳ್ಳುವುದರಿಂದ, ಈ ಮಾಹಿತಿಗಳು ದುಷ್ಟರ ಕೈ ಸೇರುತ್ತಿವೆ ಎಂದೂ ಅಂಬಾಡೆ ತಮ್ಮ ಪತ್ರದಲ್ಲಿ ಒತ್ತಿ ಹೇಳಿದ್ದರು.

ಇಲಾಖೆಯ ಆಂತರಿಕ ದಾಖಲೆಗಳಿಗೆ ಪ್ರವೇಶಿಸಲು ಮಾನ್ಯತೆ ಇಲ್ಲದ ಸರಕಾರೇತರ ಸಂಸ್ಥೆಗಳು ಹಾಗೂ ಭದ್ರತಾ ಸಿಬ್ಬಂದಿಗಳನ್ನು ಇಂತಹ ಗುಂಪುಗಳಲ್ಲಿ ಸೇರ್ಪಡೆ ಮಾಡಿರುವುದರಿಂದ ಗಮನಾರ್ಹ ಭದ್ರತಾ ಅಪಾಯ ತಲೆದೋರಿದೆ ಎನ್ನಲಾಗಿದೆ.

ಇದೀಗ ತನ್ನ ಶಿಷ್ಟಾಚಾರಗಳನ್ನು ಮತ್ತಷ್ಟು ಬಿಗಿಗೊಳಿಸಲು ಹೆಚ್ಚುವರಿ ಕ್ರಮ ಕೈಗೆತ್ತಿಕೊಂಡಿರುವ ಅರಣ್ಯ ಇಲಾಖೆಯು, ಮುಂದಿನ ಸೋರಿಕೆಯು ಅನಧಿಕೃತ ವ್ಯಕ್ತಿಗಳ ಸಾಮಾಜಿಕ ಮಾಧ್ಯಮಗಳಿಗೆ ಹಂಚಿಕೆಯಾಗುವ ಬದಲು ಅರಣ್ಯದ ನೈಸರ್ಗಿಕ ಜಲ ಮೂಲಗಳಿಗೆ ಸೀಮಿತವಾಗಿರುವುದನ್ನು ಖಾತರಿ ಪಡಿಸಲು ಮುಂದಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X