ಬಿಎಸ್ಪಿ ರಾಷ್ಟ್ರೀಯ ಸಮನ್ವಯಕಾರನಾಗಿ ರಣಧೀರ್ ಬನಿವಾಲ್

ರಣಧೀರ್ ಬನಿವಾಲ್ | PC : Randhir Singh Baniwal/Facebook
ಲಕ್ನೋ: ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಮುಖ್ಯಸ್ಥೆ ಮಾಯಾವತಿ ಬುಧವಾರ ಪಕ್ಷದ ಸದಸ್ಯ ರಣಧೀರ್ ಬನಿವಾಲ್ರನ್ನು ರಾಷ್ಟ್ರೀಯ ಸಮನ್ವಯಕಾರನಾಗಿ ನೇಮಿಸಿದ್ದಾರೆ. ಈ ಹುದ್ದೆಯನ್ನು ಮಾಯಾವತಿ ಸಹೋದರ ಹಾಗೂ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಆನಂದ್ ಕುಮಾರ್ ತಿರಸ್ಕರಿಸಿದ ಬಳಿಕ, ಅದು ಬನಿವಾಲ್ಗೆ ಹೋಗಿದೆ.
ಮಾಯಾವತಿ ರವಿವಾರ ತನ್ನ ಸಹೋದರನ ಮಗ ಆಕಾಶ್ ಆನಂದ್ರನ್ನು ಪಕ್ಷದ ರಾಷ್ಟ್ರೀಯ ಸಮನ್ವಯಕಾರ ಹುದ್ದೆಯಿಂದ ವಜಾಗೊಳಿಸಿದ್ದರು.
Next Story





