ಉತ್ತರಾಖಂಡ : 2 ಕೆಮ್ಮಿನ ಸಿರಫ್ ನಿಷೇಧಿಸಿದ ಸರಕಾರ

ಸಾಂದರ್ಭಿಕ ಚಿತ್ರ | Photo Credit : freepik.com
ಡೆಹ್ರಾಡೂನ್, ಅ. 6: ಉತ್ತರಾಖಂಡ ಸರಕಾರ ಕಾಲ್ಡ್ರೀಫ್ ಹಾಗೂ ಡೆಕ್ಸ್ಟ್ರೋಮೆಥೋರ್ಪನ್ ಹೈಡ್ರೋಬ್ರೋಮೈಡ್ ಅಂಶಗಳನ್ನು ಒಳಗೊಂಡ ಎರಡು ನಿರ್ದಿಷ್ಟ ಕೆಮ್ಮಿನ ಸಿರಪ್ಗಳಿಗೆ ಸೋಮವಾರದಿಂದ ನಿಷೇಧ ಹೇರಿದೆ.
ಮಧ್ಯಪ್ರದೇಶದಲ್ಲಿ ರವಿವಾರ ಕೆಮ್ಮಿನ ಸಿರಫ್ ಸೇವಿಸಿ ಮತ್ತೆರೆಡು ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಉತ್ತರಾಖಂಡ ಸರಕಾರ ಈ ನಿರ್ಣಯ ತೆಗೆದುಕೊಂಡಿದೆ.
‘‘ನಮ್ಮ ಮಕ್ಕಳ ಆರೋಗ್ಯದ ಬಗ್ಗೆ ರಾಜ್ಯ ಸರಕಾರ ಸಂಪೂರ್ಣವಾಗಿ ಮುನ್ನೆಚ್ಚರಿಕೆ ತೆಗೆದುಕೊಂಡಿದೆ. ಸುರಕ್ಷತಾ ಕ್ರಮವಾಗಿ ಈ ನಿಷೇಧ ಜಾರಿಗೆ ತರಲಾಗಿದೆ’’ ಎಂದು ಆರೋಗ್ಯ ಕಾರ್ಯದರ್ಶಿ ಡಾ.ಆರ್. ರಾಜೇಶ್ ಕುಮಾರ್ ಹೇಳಿದ್ದಾರೆ.
ನಿಷೇಧಿತ ಔಷಧಗಳು ಮತ್ತೆ ಮಾರುಕಟ್ಟೆ ಪ್ರವೇಶಿಸದಂತೆ ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸುವಂತೆ ಆಹಾರ ಹಾಗೂ ಔಷಧ ನಿಯಂತ್ರಣ (ಎಫ್ಡಿಎ)ಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಡಾ.ರಾಜೇಶ್ ಕುಮಾರ್ ದೃಢಪಡಿಸಿದ್ದಾರೆ.
Next Story





