ಜೆಎನ್ ಯು ವಿವಾದ: ಐದು ಪತ್ರಕರ್ತರು , ಇಬ್ಬರು ಬೆಂಬಲಿಗರಿಗೆ ಮಾತ್ರ ಕೋರ್ಟ್ ಹಾಲ್ ಪ್ರವೇಶ : ಸುಪ್ರೀಂ ಕೋರ್ಟ್

Update: 2016-02-17 08:07 GMT

ಹೊಸದಿಲ್ಲಿ , ಫೆ. 17 :  ದೇಶದ್ರೋಹದ ಆರೋಪದಲ್ಲಿ ಬಂಧಿತ ಜೆಎನ್ ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದು ಈ ಸಂದರ್ಭದಲ್ಲಿ ಕೆಲವು ನಿರ್ಬಂಧಗಳನ್ನು ಸುಪ್ರೀಂ ಕೋರ್ಟ್ ನೀಡಿದೆ. ವಿಚಾರಣೆಯ ವೇಳೆ ಗರಿಷ್ಟ ಐದು ವರದಿಗಾರರು ಹಾಗು ಕನ್ಹಯ್ಯ ಅವರ ಬೆಂಬಲಿಗರ ಪೈಕಿ ಕೇವಲ ಇಬ್ಬರು ಮಾತ್ರ ಕಲಾಪ ನಡೆಯುವ ಕೋಣೆಗೆ ಹೋಗಬಹುದು ಎಂದು ಅದು ಇಂದು ಹೇಳಿದೆ. 

ಸೋಮವಾರ ಕನ್ಹಯ್ಯ ರನ್ನು ಕೋರ್ಟ್ ಗೆ ಹಾಜರು ಪಡಿಸುವಾಗ ಬಿಜೆಪಿ ಶಾಸಕ ಹಾಗು ವಕೀಲರು ನಡೆಸಿರುವ ಹಲ್ಲೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News