ಒಂಬತ್ತನೆ ತರಗತಿ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆಗೆ ತಲ್ಲಣಗೊಂಡ ಮಹಾರಾಷ್ಟ್ರ!

Update: 2016-07-18 10:25 GMT

ಹೊಸದಿಲ್ಲಿ,ಜುಲೈ 18: ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿ ಒಂಬತ್ತನೆ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದು ಅಂಗಊನಗೊಳಿಸಿ ಹತ್ಯೆಗೈದ ಘಟನೆ ಬಯಲಾಗಿದ್ದು ಈ ಭಯಾನಕ ಘಟನೆಯಿಂದಾಗಿ ಇಡೀ ಮಹಾರಾಷ್ಟ್ರವೇ ತಲ್ಲಣಗೊಂಡಿದೆ. ಪೊಲೀಸರು ಈ ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಅಹ್ಮದ್‌ನಗರ ಜಿಲ್ಲೆಯ ಗ್ರಾಮವೊಂದರಲ್ಲಿ ಎರಡು ದಿವಸ ಮೊದಲು ಅತ್ಯಾಚಾರ ಘಟನೆ ನಡೆದಿದ್ದು. ಅತ್ಯಾಚಾರಕ್ಕೊಳಗಾದ ಬಾಲಕಿಯ ದೇಹದಲ್ಲಿ ಗಾಯಗಳಿಲ್ಲದ ಅಂಗಗಳೇ ಇರಲಿಲ್ಲ. ದೇಹದ ಅಂಗಾಗಗಳನ್ನು ಊನಗೊಳಿಸಲಾಗಿತ್ತು. ಆರೋಪಿಗಳು ಅತ್ಯಾಚಾರಗೈದ ಬಳಿಕ ಬಾಲಕಿಯ ಕೈಕಾಲುಗಳನ್ನು ಮುರಿದು ಹಾಕಿದ್ದರು.ಆನಂತರ ಅವಳ ಕೊರಳು ಸೀಳಿಹಾಕಿ ಕೊಂದಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಆಧರಿಸಿ ಮಿಡ್‌ಡೇ ಪತ್ರಿಕೆ ವರದಿಮಾಡಿದೆ ಎಂದು ತಿಳಿದು ಬಂದಿದೆ.

ಬಾಲಕಿಯ ಹತ್ಯೆ ಘಟನೆ ಬಯಲಾದ ನಂತರ ಆಕ್ರೋಶಗೊಂಡ ಜನರು ಬೀದಿಗಿಳಿದಿದ್ದಲ್ಲದೆ ಮುಖ್ಯಮಂತ್ರಿದೇವೇಂದ್ರ ಫಡ್ನಾವಿಸ್ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆನ್ನಲಾಗಿದೆ. ಬಾಲಕಿ ತನ್ನ ಅಜ್ಜನನ್ನು ಭೇಟಿಯಾಗಿ ಮನೆಗೆ ಮರಳುತ್ತಿದ್ದಾಗ ಹಿಂಬಾಲಿಸಿ ಬಂದ ಜೀತೇಂದ್ರ ಶಿಂಧೆ, ಸಂತೋಷ್ ಭವಲ್ ಮತ್ತುನಿತಿನ್ ಧಾಯಿಲೂಮ್ ಎಂಬವರು ಬಾಲಕಿಯನ್ನು ಎತ್ತೊಯ್ದುಅತ್ಯಾಚಾರವೆಸಗಿ ಕ್ರೂರವಾಗಿ ಹಿಂಸೆ ನೀಡಿ ಕೊಂದರೆಂದು ಪೊಲೀಸರು ತಿಳಿಸಿದ್ದಾರೆ. ಜುಲೈ ಹದಿಮೂರರಂದು ಘಟನೆ ನಡೆದಿದ್ದರೂ ಅದು ಒಂದೆರಡು ದಿನಗಳ ನಂತರ ಬಯಲಾಗಿತ್ತು. ಆರೋಪಿಯಲ್ಲೊಬ್ಬನಾದ ಶಿಂಧೆ ಹೊಸ ಬೈಕ್ ಖರೀದಿಸಿದ ಸಂಭ್ರಮದಲ್ಲಿ ಇತರ ಇಬ್ಬರು ಅರೋಪಿಗಳೊಂದಿಗೆ ಸೇರಿ ಮರವೊಂದರ ಕೆಳಗೆ ಪಾರ್ಟಿ ಮಾಡುತ್ತಿದ್ದ. ಆಗ ಆ ದಾರಿಯಾಗಿ ಬಾಲಕಿ ಬಂದಿದ್ದು ಅವಳನ್ನುಹಿಡಿದು ವಿವಸ್ತ್ರಗೊಳಿಸಿ ಅತ್ಯಾಚಾರವೆಸಗಿದ್ದಾರೆ. ನಂತರ ಇದನ್ನು ಗ್ರಾಮದ ವ್ಯಕ್ತಿಯೊಬ್ಬನ ಗಮನಿಸಿ ಅತ್ತ ಹೋದಾಗ ಆರೋಪಿಗಳು ಓಡಿ ಪರಾರಿಯಾಗಿದ್ದರು. ವಿವಸ್ತ್ರಳಾಗಿದ್ದ ಬಾಲಕಿಯ ದೇಹವಿಡೀ ಗಾಯವಾಗಿತ್ತಲ್ಲದೆ ಅವಳ ಮೂಗಿನಿಂದ ರಕ್ತಸುರಿಯುತ್ತಿತ್ತು. ಕೂಡಲೆ ಈ ವ್ಯಕ್ತಿ ಗ್ರಾಮದ ಇತರರಿಗೆತಿಳಿಸಿದ್ದಾನೆ. ನಂತರ ಅವರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದರೂ ಅವಳು ಮೃತಳಾದಳೆಂದು ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News