ಶಾಲಾ ಶುಲ್ಕವನ್ನು ಕಟ್ಟಲಾಗದ ಬಾಲಕಿ ಆತ್ಮಹತ್ಯೆಗೆ ಶರಣು

Update: 2016-07-25 18:28 GMT

ಕಾನಪುರ, ಜು.25: ಬಡತನದಿಂದಾಗಿ ಶಾಲಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗದೆ ನೊಂದಿದ್ದ ಹದಿಹರೆಯದ ಬಾಲಕಿ ಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಇಲ್ಲಿಯ ಕಲ್ಯಾಣಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಯಾಸ್ಮೀನ್(18) ಖಾಸಗಿ ಶಾಲೆಯಲ್ಲಿ 12ನೆ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ನಿನ್ನೆ ಮನೆಯಲ್ಲಿ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡವಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ. ಬಾಕಿಯಿರುವ 1,500 ರೂ.ಶುಲ್ಕವನ್ನು ಪಾವತಿಸುವಂತೆ ಶಾಲೆಯಲ್ಲಿ ನನ್ನ ಮಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು ಎಂದು ಯಾಸ್ಮೀನ್‌ಳ ತಂದೆ, ವೃತ್ತಿಯಲ್ಲಿ ಟ್ರಕ್‌ಚಾಲಕರಾಗಿರುವ ಯಾಕೂಬ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News