10 ರೂಪಾಯಿಗೆ ಜಗಳ: ವ್ಯಕ್ತಿಯನ್ನು ಥಳಿಸಿ ಕೊಲೆ

Update: 2016-12-04 15:31 GMT

ಬಾಂದಾ, ಡಿ.4: 10 ರೂಪಾಯಿ ವಿಷಯದಲ್ಲಿ ನಡೆದ ವಿವಾದದಲ್ಲಿ ರಿಕ್ಷಾ ಡೈವರ್‌ನನ್ನು ಥಳಿಸಿ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಬಂದೌಸ ಪ್ರದೇಶದಲ್ಲಿ ನಡೆದಿದೆ.

 ಮುನ್ನಾ ಯಾದವ್ ಎಂಬ ರಿಕ್ಷಾ ಡ್ರೈವರ್ ಹತ್ಯೆಯಾದ ವ್ಯಕ್ತಿ. ಈತನ ರಿಕ್ಷಾದಲ್ಲಿ ಪ್ರಯಾಣಿಸಿದ ಮೂವರು ಬಾಡಿಗೆ ವಿಷಯದಲ್ಲಿ ತಗಾದೆ ತೆಗೆದರು. 10 ರೂ. ಹೆಚ್ಚು ಬಾಡಿಗೆ ಕೇಳಿದನೆಂದು ಯಾದವ್ ಮೇಲೆ ಮೂವರು ಯದ್ವಾತದ್ವಾ ಹಲ್ಲೆಗೈದಿದ್ದಾರೆ. ಅಸ್ವಸ್ಥಗೊಂಡಿದ್ದ ಯಾದವ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆಗೇ ಆತ ಮೃತಪಟ್ಟಿದ್ದ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ . ಹಲ್ಲೆಕೋರರು ಪರಾರಿಯಾಗಲು ಯತ್ನಿಸಿದಾಗ ಸ್ಥಳದಲ್ಲಿದ್ದವರು ಓರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News