ಜನವರಿಯಲ್ಲಿ ಶಬರಿಮಲೆಗೆ: ತೃಪ್ತಿದೇಸಾಯಿ

Update: 2016-12-25 08:00 GMT

ಪಯ್ಯನ್ನೂರ್,ಡಿ.25: ಜನವರಿಯಲ್ಲಿ ಶಬರಿಮಲೆಗೆ ತೆರಳಲಿದ್ದೇನೆ ಎಂದು ತೃಪ್ತಿದೇಸಾಯಿ ಹೇಳಿದ್ದಾರೆ. ಅವರು ಪಯ್ಯನ್ನೂರಿನಲ್ಲಿ ಸ್ವತಂತ್ರಲೋಕಂ 2016 ವಿಚಾರಗೋಷ್ಠಿ ಉದ್ಘಾಟಿಸಿ ಮಾತಾಡುತ್ತಿದ್ದರು.

 ನಂಬಿಕೆಯನ್ನಲ್ಲ, ನಂಬಿಕೆಯ ಹೆಸರಿನಲ್ಲಿ ನಡೆಯುವ ವ್ಯಾಪಾರವನ್ನು ಪ್ರಶ್ನಿಸುತ್ತಿದ್ದೇನೆ. ಬೇರೆಲ್ಲ ಅಯ್ಯಪ್ಪಕ್ಷೇತ್ರಗಳಲ್ಲಿ ಮಹಿಳಾ ಪ್ರವೇಶಕ್ಕೆ ನಿಷೇಧವಿಲ್ಲ. ಕೇವಲ ಶಬರಿಮಲೆಯಲ್ಲಿ ಮಾತ್ರ ಈ ತಾರತಮ್ಯ ಯಾಕೆ ಎಂದು ಅವರು ಪ್ರಶ್ನಿಸಿದರು.

ಮಹಿಳೆಯರ ಹಕ್ಕಿಗಾಗಿ ಇದೆಲ್ಲಾ. ಆದ್ದರಿಂದ ಎಲ್ಲರೂ ಬೆಂಬಲಿಸಬೇಕು ಎಂದು ಅವರು ಜನರನ್ನು ವಿನಂತಿಸಿದ್ದಾರೆ.ಕೇರಳದ ಜಾತ್ಯತೀತ ಸರಕಾರದ ಮೇಲೆ ಹೆಚ್ಚು ನಿರೀಕ್ಷೆಯಿದೆ. ಕೇರಳದ ಸಾರ್ವಜನಿಕ ಕಾರ್ಯಕ್ರಮದಲ್ಲಿ ತಾನು ಮೊದಲಬಾರಿ ಭಾಗವಹಿಸುತ್ತಿರುವುದೆಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News