ಯುವಕನನ್ನು ಜೀಪ್ ಮುಂಭಾಗಕ್ಕೆ ಕಟ್ಟಿದ್ದ ಅಧಿಕಾರಿಗೆ ಸೇನೆಯಿಂದ ಸನ್ಮಾನ

Update: 2017-05-22 14:40 GMT

ಕಾಶ್ಮೀರ, ಮೇ 22: ಪ್ರತಿಭಟನೆಯ ಸಂದರ್ಭ ಕಾಶ್ಮೀರಿ ಯುವಕನನ್ನು ಸೇನಾ ಜೀಪ್ ನ ಮುಂಭಾಗಕ್ಕೆ ಕಟ್ಟಿದ್ದ ಅಧಿಕಾರಿಯನ್ನು ಸೇನೆ ಸನ್ಮಾನಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಮೇಜರ್ ನಿತಿನ್ ಗೊಗೊಯ್ ವಿರುದ್ಧ ತನಿಖೆ ನಡೆಯುತ್ತಿರುವಂತೆಯೇ ಪ್ರತಿರೋಧದ ಕಾರ್ಯಾಚರಣೆಗಾಗಿ ಸೇನೆ ಅವರಿಗೆ ಮೆಚ್ಚುಗೆ ಪತ್ರವನ್ನು ನೀಡಿ ಸನ್ಮಾನಿಸಿದೆ.

ಚುನಾವಣೆಯ ಸಂದರ್ಭ ನಡೆದ ಪ್ರತಿಭಟನೆಯ ವೇಳೆ ಕಾಶ್ಮೀರಿ ಯುವಕನೋರ್ವನನ್ನು ಸೇನಾ ಜೀಪ್ ಮುಂಭಾಗಕ್ಕೆ ಕಟ್ಟಿದ್ದ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಟೀಕೆಗಳೂ ವ್ಯಕ್ತವಾಗಿತ್ತು. ಆದರೆ ಈ ಬಗ್ಗೆ ಸಮರ್ಥಿಸಿಕೊಂಡಿದ್ದ ಭದ್ರತಾ ಪಡೆ ರಕ್ಷಣೆಗಾಗಿ ಹೀಗೆ ಮಾಡಲಾಗಿದೆ ಎಂದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News