ಕಾರ್ಟೂನ್ ನೋಡಿ ತನಗೇ ಬೆಂಕಿ ಹಚ್ಚಿಕೊಂಡ ಬಾಲಕ ಮೃತ್ಯು

Update: 2017-06-03 12:22 GMT

ಹೈದರಾಬಾದ್, ಜೂ.3: ಕಾರ್ಟೂನ್ ನ ದೃಶ್ಯವನ್ನು ಕಂಡು ಅದನ್ನು ಅನುಕರಿಸಿದ ಬಾಲಕನೋರ್ವ ತನಗೆ ಬೆಂಕಿ ಹಚ್ಚಿದ ಪರಿಣಾಮ ಸಾವನ್ನಪ್ಪಿದ ಘಟನೆ ಬಲಾಪುರ್ ಎಂಬಲ್ಲಿ ನಡೆದಿದೆ.

ತನ್ನ ಅಜ್ಜನ ಮನೆಯಲ್ಲಿದ್ದ ಜಯದೀಪ್ ಮದುಗುಲಾ ಎಂಬ ಬಾಲಕ ಬೆಂಕಿ ಹಚ್ಚಿಕೊಂಡಿದ್ದಾನೆ.  ತಕ್ಷಣವೇ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ನಂತರ ಬಾಲಕನನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕ ಶನಿವಾರ ಮೃತಪಟ್ಟಿದ್ದಾನೆ ಎಂದು ಸಬ್ ಇನ್ಸ್ ಪೆಕ್ಟರ್ ವಿಷ್ಣುವರ್ಧನ್ ರೆಡ್ಡಿ ಹೇಳಿದ್ದಾರೆ.

“ಕಾರ್ಟೂನ್ ನಲ್ಲಿದ್ದ ಪಾತ್ರದಂತೆ ತಾನೂ ಬೆಂಕಿಯಲ್ಲಿ ದಹಿಸುತ್ತಿರುವುದಾಗಿ ಬಾಲಕ ಬೊಬ್ಬಿಡುತ್ತಿದ್ದ ಎಂದು ಬಾಲಕನ ಅಜ್ಜ ಹೇಳಿದ್ದಾರೆ. ನಮಗೂ ಆತನ ಈ ಕೃತ್ಯಕ್ಕೆ ಬೇರ್ಯಾವುದೇ ಕಾರಣಗಳು ಲಭಿಸುತ್ತಿಲ್ಲ” ಎಂದು ರೆಡ್ಡಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News