ಕುವೈಟ್: 15 ಭಾರತೀಯರಿಗೆ ಮರಣದಂಡನೆಯಿಂದ ರಿಲೀಫ್

Update: 2017-09-30 13:44 GMT

ಹೊಸದಿಲ್ಲಿ,ಸೆ. 30: ಕುವೈಟ್ ಜೈಲಿನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ 15 ಮಂದಿ ಭಾರತೀಯರ ಶಿಕ್ಷೆಯನ್ನು ಜೀವಾವಧಿಗಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾಸ್ವರಾಜ್ ತಿಳಿಸಿದ್ದಾರೆ. ಕುವೈಟ್ ಅಮೀರ್ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗಿಳಿಸುವ ವಿನಾಯಿತಿಯನ್ನು ಪ್ರಕಟಿಸಿದ್ದಾರೆಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ. 119 ಭಾರತೀಯ ಕೈದಿಗಳಿಗೆ ಶಿಕ್ಷೆಯಿಲ್ಲಿ ವಿನಾಯಿತಿ ನೀಡಲಾಗಿದೆ. ಭಾರತೀಯರಿಗೆ ಶಿಕ್ಷೆಯಲ್ಲಿ ವಿನಾಯತಿ ನೀಡಿದ ಕುವೈಟ್ ಅಮೀರ್‌ಗೆ ಸುಷ್ಮಾಸ್ವರಾಜ್ ಟ್ವಿಟರ್‌ ಮೂಲಕ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಸಣ್ಣ ಅಪರಾಧಕೃತ್ಯಗಳಲ್ಲಿ ಭಾಗಿಯಾಗಿ ಜೈಲುಪಾಲಾಗಿದ್ದ 149 ಭಾರತೀಯ ಕೈದಿಗಳಿಗೆ ಶಾರ್ಜಾ ಅಮೀರ್ ಇತ್ತೀಚೆಗೆ ಕ್ಷಮಾದಾನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News