ರಸ್ತೆ ಉಬ್ಬುಗಳನ್ನು ಕೂಡಲೇ ಸರಿಪಡಿಸಿ

Update: 2017-11-27 18:20 GMT

ಮಾನ್ಯರೆ,

ನಗರದ ಮುಖ್ಯ ರಸ್ತೆಗಳಿಗೆ ಸಂಭಾವ್ಯ ಅಪಾಯ ತಡೆಗಾಗಿ ಮನಪಾ ಅಲ್ಲಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿದೆ. ಆದರೆ ಈ ಸಲದ ಮಳೆಗಾಲಕ್ಕೆ ಹೆಚ್ಚಿನ ರಸ್ತೆ ಉಬ್ಬುಗಳು ಹದಗೆಟ್ಟಿವೆ. ಅವುಗಳಲ್ಲಿ ಕೆಲವು ಅರ್ಧಂಬರ್ಧವಷ್ಟೇ ಉಳಿದಿವೆ.

ಇಂತಹ ರಸ್ತೆ ಉಬ್ಬುಗಳಲ್ಲಿ ಚಲಿಸುವ ವಾಹನ ಸವಾರರಿಗೆ, ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ರಾತ್ರಿಯ ಸವಾರಿಯಂತೂ ಅತ್ಯಂತ ಅಪಾಯಕಾರಿ.

 ಈಗ ಮಳೆಗಾಲ ಕಳೆದು ಚಳಿಗಾಲ ಆರಂಭವಾಗಿದೆ. ಮೇಯರ್‌ರವರು ಮಳೆಗಾಲ ಕಳೆದ ಆನಂತರ ರಸ್ತೆಗಳನ್ನು ರಿಪೇರಿ ಮಾಡುವುದರ ಬಗ್ಗೆ ಮಾಧ್ಯಮಗಳ ಮೂಲಕ ಭರವಸೆ ನೀಡಿದ್ದರು. ಆದ್ದರಿಂದ ಕೂಡಲೇ ನಗರದ ಎಲ್ಲ ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವುದರೊಂದಿಗೆ ರಸ್ತೆ ಉಬ್ಬುಗಳನ್ನೂ ಸರಿಪಡಿಸಬೇಕಾಗಿದೆ.

ಜೆ.ಎಫ್.ಡಿ’ಸೋಜಾ, ಅತ್ತಾವರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News