ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸಾವಿರಕ್ಕೂ ಅಧಿಕ ಮಂದಿ

Update: 2018-02-17 15:00 GMT

ಇಟಾನಗರ್, ಫೆ. 17: ಅರುಣಾಚಲ ಪ್ರದೇಶದ ನಾಮ್‌ಸಾಯಿ ಜಿಲ್ಲೆಯ ಲೀಕಾಂಗ್ ವಿಧಾನ ಸಭಾ ಕ್ಷೇತ್ರದ ಸಾವಿರಾರು ಜನರು ಇತ್ತೀಚೆಗೆ ಇಲ್ಲಿ ನಡೆದ ರ್ಯಾಲಿಯಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಮರು ಸೇರ್ಪಡೆಗೊಂಡಿದ್ದಾರೆ. ಸಾವಿರಾರು ಜನರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವುದನ್ನು ‘ರಾಜ್ಯದ ಸಮೃದ್ಧಿ ಬಗ್ಗೆ ಸಾಮೂಹಿಕವಾಗಿ ಜಾಗೃತರಾಗಿರುವುದು’ ಎಂದು ಅರುಣಾಚಲ ಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಕಮ್ ಸಂಜಯ್ ವ್ಯಾಖ್ಯಾನಿಸಿದ್ದಾರೆ. ಇಲ್ಲಿನ ಜನರು ಮುಖ್ಯವಾಗಿ ಯುವಕರು ಪರಿಶ್ರಮಿಗಳು ಹಾಗೂ ಉತ್ಸಾಹಿಗಳು. ಆದರೆ, ಮತ್ತೆ ಮತ್ತೆ ಆಯ್ಕೆಯಾಗಿರುವ ಸ್ಥಳೀಯ ನಾಯಕರು ಮತದಾರರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದರಿಂದ ಈ ಜನರು ಪ್ರಸ್ತುತ ಹೀನಾಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಹಕ್ಕುಗಳನ್ನು ಆಗ್ರಹಿಸಿ ನೀವು ಸಮರ್ಥವಾಗಿ ಬಂಡಾಯ ಏಳಿ. ಕಾಂಗ್ರೆಸ್ ಪಕ್ಷ ನಿಮ್ಮ ಜೊತೆಗಿದೆ. ನೀವು ಸಿದ್ಧರಿದ್ದೀರಾ ? ಎಂದು ಅವರು ಪ್ರಶ್ನಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News