9 ಮಕ್ಕಳ ಸಾವಿಗೆ ಕಾರಣನಾಗಿರುವ ಬಿಜೆಪಿ ನಾಯಕನ ವಿರುದ್ಧ ಬಿಹಾರ ವಿಧಾನಸಭೆಯಲ್ಲಿ ಭಾರೀ ಪ್ರತಿಭಟನೆ

Update: 2018-02-27 14:00 GMT

ಪಾಟ್ನಾ,ಫೆ.27: ಮುಝಫ್ಫರಪುರ ಸಮೀಪ ಕಳೆದ ವಾರ ಸಂಭವಿಸಿದ್ದ ಹಿಟ್ ಆ್ಯಂಡ್ ರನ್ ಅಪಘಾತ ಪ್ರಕರಣದಲ್ಲಿ ಒಂಭತ್ತು ಅಮಾಯಕ ಮಕ್ಕಳ ಸಾವು ಮಂಗಳವಾರ ಬಿಹಾರ ವಿಧಾನಸಭೆಯಲ್ಲಿ ಅನುರಣಿಸಿತು. ಸೀತಾಮಢಿಯ ಸ್ಥಳೀಯ ಬಿಜೆಪಿ ನಾಯಕ ಮನೋಜ ಬೈಥಾ ಮದ್ಯದ ಅಮಲಿನಲ್ಲಿ ತನ್ನ ಬೊಲೆರೊ ವಾಹನವನ್ನು ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣರಾಗಿದ್ದಾರೆಂದು ಆರೋಪಿಸಲಾಗಿದ್ದು, ಆರ್‌ಜೆಡಿ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದ ಪ್ರತಿಪಕ್ಷಗಳು ತಲೆಮರೆಸಿಕೊಂಡಿರುವ ಬೈಥಾ ವಿರುದ್ಧ ತಕ್ಷಣ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿದವು.

ಬೈಥಾರ ರಾಜಕೀಯ ನಂಟಿನಿಂದಾಗಿ ಅವರನ್ನು ರಕ್ಷಿಸಲು ನಿತೀಶ್ ಕುಮಾರ್ ಸರಕಾರವು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷವು ಆರೋಪಿಸಿದೆಯಾದರೂ, ಸರಕಾರವು ಅದನ್ನು ನಿರಾಕರಿಸಿದೆ. ಬೈಥಾ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಸುಶೀಲ ಕುಮಾರ್ ಮೋದಿ ಅವರು ಸೋಮವಾರ ಹೇಳಿದ್ದರು.

ರಾಜ್ಯದ ಆಡಳಿತ ಮೈತ್ರಿಕೂಟದ ಭಾಗವಾಗಿರುವ ಬಿಜೆಪಿ ಸೋಮವಾರ ಸಂಜೆ ಬೈಥಾರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಅಮಾನತುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News