ನಿರ್ದಿಷ್ಟ ಧರ್ಮಕ್ಕೆ ಸೇರಿದವನಾಗಿದ್ದರೆ...!?

Update: 2018-06-28 18:28 GMT

ಮಾನ್ಯರೇ,

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಪರಶುರಾಮ್ ವಾಗ್ಮೋರೆ ಬಂಧನವಾಗುತ್ತಿದ್ದಂತೆ ಈ ನಾಡಿನ ಹೆಚ್ಚಿನ ಸುದ್ದಿ ಚಾನೆಲ್‌ಗಳು ಬಹಳ ನಾಜೂಕಾಗಿ ವರದಿ ಮಾಡಿವೆ. ಒಂದು ವೇಳೆ ವಾಗ್ಮೋರೆ ಜಾಗದಲ್ಲಿ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ವ್ಯಕ್ತಿಯ ಹೆಸರಿರುತ್ತಿದ್ದರೆ ಇಷ್ಟೊತ್ತಿಗೆ ಅವನನ್ನು ಇಂಟರ್‌ನ್ಯಾಶನಲ್ ಭಯೋತ್ಪಾದಕ, ಅವನು ಹೊಂದಿದ ಸಂಪರ್ಕ, ಇನ್ನೆಷ್ಟು ಗಣ್ಯರನ್ನು ಕೊಲ್ಲಲು ಸ್ಕೆಚ್ ಹಾಕಿದ್ದ, ಅವನ ವೈಯಕ್ತಿಕ ಜೀವನ, ಎಲ್ಲಿ ತರಬೇತಿ ಪಡೆದದ್ದು... ಹೀಗೆ ಹತ್ತು ಹಲವು ಕಪೋಲಕಲ್ಪಿತ ವರದಿಗಳನ್ನು ಒಂದೊಂದಾಗಿ ಪ್ರಸಾರ ಮಾಡುತ್ತಾ ಅವನ ಜಾತಕವನ್ನೇ ಜಾಲಾಡಿಸುತ್ತಿದ್ದವು, ಆದರೆ ಇಂದು ಈ ವಾಗ್ಮೋರೆ ಸಿಂದಗಿ ಯವನು ಎನ್ನುವುದೊಂದು ಬಿಟ್ಟರೆ ಅವನ ಹಿನ್ನೆಲೆ ಏನು? ಎಂಬುದೇ ಜನರಿಗೆ ಗೊತ್ತಿಲ್ಲ, ಇಲೆಕ್ಟ್ರಾನಿಕ್ ಮಾಧ್ಯಮಗಳೆಲ್ಲ ಈಗ ಜಾಣ ಮೌನ ತಾಳಿವೆ. ಅಪರಾಧ ಸಾಬೀತಾಗುವವರೆಗೆ ಈ ಕಾಳಜಿ ಎಲ್ಲ ಆರೋಪಿಗಳೊಂದಿಗೂ ಇವರು ಹೊಂದಿರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮೇಲೆ ಜನರು ವಿಶಾ್ವಸವನ್ನೇ ಕಳೆದುಕೊಳ್ಳುತ್ತಾರೆ.

-ಆರ್. ಎಚ್. ಇಟಗಿ, ರೋಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News