ಕುಂಭಮೇಳಕ್ಕೆ ಜಾಗ ನೀಡಲು ಮಸೀದಿಗಳನ್ನು ತೆರವುಗೊಳಿಸಿದ ಮುಸ್ಲಿಮರು
Update: 2018-07-04 11:56 GMT
ಹೊಸದಿಲ್ಲಿ, ಜು.4: ಕುಂಭಮೇಳಕ್ಕಾಗಿ ಸರಕಾರವು ರಸ್ತೆ ವಿಸ್ತರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಲಹಾಬಾದ್ ನ ಮುಸ್ಲಿಮರು ಕೆಲ ಮಸೀದಿಗಳ ಗೋಡೆಗಳನ್ನು ಒಡೆದು ಕುಂಭಮೇಳಕ್ಕೆ ಸಹಕಾರ ನೀಡಿದ್ದಾರೆ.
ಸರಕಾರಿ ಜಾಗಗಳಲ್ಲಿದ್ದ ಭಾಗಗಳನ್ನು ತೆರವುಗೊಳಿಸಲಾಗಿದೆ. "ನಾವು ಇದನ್ನು ನಮ್ಮ ಇಚ್ಛೆಯಂತೆಯೇ ಮಾಡಿದ್ದೇವೆ. ಈ ಭಾಗಗಳನ್ನು ಸರಕಾರಿ ಜಾಗದಲ್ಲಿ ನಿರ್ಮಿಸಲಾಗಿತ್ತು. ನಾವು ಅದನ್ನು ತೆರವುಗೊಳಿಸಿದ್ದೇವೆ. ಕುಂಭಮೇಳಕ್ಕಾಗಿ ಸರಕಾರ ರಸ್ತೆ ವಿಸ್ತರಣೆ ಮಾಡುತ್ತಿದೆ. ನಾವು ಅದಕ್ಕಾಗಿ ಸಹಕಾರ ನೀಡುತ್ತಿದ್ದೇವೆ" ಎಂದು ಸ್ಥಳೀಯ ಮುಸ್ಲಿಮರು ಹೇಳಿದ್ದಾರೆ.
ಕುಂಭಮೇಳದಲ್ಲಿ ದೇಶಾದ್ಯಂತದ ಲಕ್ಷಾಂತರ ಮಂದಿ ಭಾಗವಹಿಸುತ್ತಿರುವುದರಿಂದ ಜಿಲ್ಲಾಡಳಿತ ರಸ್ತೆಗಳನ್ನು ವಿಸ್ತರಿಸುತ್ತಿದೆ. ಮುಂದಿನ ವರ್ಷ ಜನವರಿ 15ಕ್ಕೆ ಕುಂಭಮೇಳ ಆರಂಭಗೊಳ್ಳಲಿದೆ.