ಸೋಲಿನ ದವಡೆಗೆ ಸಿಲುಕಿದ ಶ್ರೀಲಂಕಾ

Update: 2018-09-15 18:24 GMT

  ದುಬೈ, ಸೆ.15: ಏಶ್ಯಕಪ್‌ನ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆಲುವಿಗೆ 262 ರನ್‌ಗಳ ಗೆಲುವಿನ ಸವಾಲನ್ನು ಪಡೆದ ಶ್ರೀಲಂಕಾ ತಂಡ 32 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 112ರನ್ ಗಳಿಸಿದ್ದು, ಸೋಲಿನ ದವಡೆಗೆ ಸಿಲುಕಿದೆ.

   ಬಾಂಗ್ಲಾದ ಬೌಲರ್‌ಗಳ ಸಂಘಟಿತ ದಾಳಿಗೆ ಸಿಲುಕಿ ಉಪುಲ್ ತರಂಗ(27), ಕುಸಾಲ್ ಮೆಂಡಿಸ್ (0), ಕುಸಾಲ್ ಪೆರೆರಾ (11), ಧನಂಜಯ ಡಿ ಸಿಲ್ವ(0), ಆ್ಯಂಜೆಲೊ ಮ್ಯಾಥ್ಯೂಸ್(16), ದಾಸುನ್ ಶನಕಾ(7), ತಿಸ್ಸರಾ ಪೆರೆರಾ(6) ಮತ್ತು ಲಕ್ಮಲ್ (20) ಔಟಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News