ಬಸ್ ವ್ಯವಸ್ಥೆ ಕೂಡಲೇ ಕಲ್ಪಿಸಿ
Update: 2018-10-05 18:18 GMT
ಮಾನ್ಯರೇ,
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನಲ್ಲಿರುವ ಮಚ್ಚಂಪಾಡಿಯಲ್ಲಿ ಇತ್ತೀಚಿನ ವರೆಗೆ ಒಂದು ಬಸ್ನ ವ್ಯವಸ್ಥೆಯಾದರೂ ಇತ್ತು. ಆದರೆ ಈಗ ಅದು ಕೂಡಾ ಲಭ್ಯವಿಲ್ಲ. ಹೀಗಾಗಿ ಊರಿನ ನಾಗರಿಕರಿಗೆ, ಊರಿನ ಹೊರಗೆ ಸಂಚರಿಸಲು ತುಂಬಾ ತೊಡಕಾಗಿದೆ.
ಊರಲ್ಲಿರುವ ನಾಗರಿಕರು, ಉದ್ಯೋಗಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಊರಿನ ಹೊರಗೆ ಹೋಗಬೇಕಾದರೆ ಬಸ್ಗಳನ್ನೇ ಅವಲಂಬಿಸಬೇಕಾಗಿದೆ. ಆದ್ದರಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿನ ಸಾರಿಗೆ ಸಮಸ್ಯೆಯ ತೀವ್ರತೆಯನ್ನು ಮನಗಂಡು ಇನ್ನಾದರೂ ಇಲ್ಲಿ ಅರ್ಧಗಂಟೆಗೆ ಒಂದರಂತೆ ಬಸ್ ವ್ಯವಸ್ಥೆ ಕಲ್ಪಿಸಿದರೆ ಊರಿನ ಎಲ್ಲ ನಾಗರಿಕರಿಗೂ ಉಪಯೋಗವಾಗುತ್ತದೆ.