ವಿವಾಹ ದಿಬ್ಬಣದಲ್ಲಿ ವರನ ಮೇಲೆ ಗುಂಡಿನ ದಾಳಿ

Update: 2018-11-20 15:01 GMT

ಹೊಸದಿಲ್ಲಿ, ನ. 20: ದಕ್ಷಿಣ ದಿಲ್ಲಿಯ ಮಾದಂಗಿರ್‌ನಲ್ಲಿ ಸೋಮವಾರ ರಾತ್ರಿ ವಿವಾಹದ ದಿಬ್ಬಣ ತೆರಳುತ್ತಿದ್ದಾಗ ಇಬ್ಬರು ಅಪರಿಚಿತ ದುಷ್ಕರ್ಮಿಗಳು 25 ವರ್ಷದ ವರನ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ವರ ಬಾದಲ್ ಅವರ ಹೆಗಲಿಗೆ ಗಾಯವಾಗಿದೆ. ಅವರು ಇಲ್ಲಿನ ಆಸ್ಪತ್ರೆಯಲ್ಲಿ ಮೂರು ಗಂಟೆಗಳ ಕಾಲ ಚಿಕಿತ್ಸೆ ಪಡೆದರು. ಅನಂತರ ವಿವಾಹದ ಸಂಪ್ರದಾಯ ಪೂರ್ಣಗೊಳಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ವಿ

ವಾಹ ಮುಗಿದ ಬಳಿಕ ಬಾದಲ್ ಅವರನ್ನು ಮತ್ತೆ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು ಎಂದು ಪೊಲೀಸ್ ಉಪ ಆಯಕ್ತ ವಿಜಯ ಕುಮಾರ್ ಹೇಳಿದ್ದಾರೆ. ಗುಂಡು ಹೆಗಲಿನ ಎಲುಬಿನ ಎಡೆಯಲ್ಲಿ ಸಿಲುಕಿಕೊಂಡಿತ್ತು. ಅನಂತರ ವೈದ್ಯರು ಅದನ್ನು ಶಸ್ತ್ರಚಿಕಿತ್ಸೆ ನಡೆಸಿ ತೆಗೆದರು ಎಂದು ಕುಮಾರ್ ಹೇಳಿದ್ದಾರೆ. ವಿವಾಹನ ನಡೆಯಲಿರುವ ಭವನದಿಂದ 400 ಮೀಟರ್ ದೂರದಲ್ಲಿ ಈ ದಾಳಿ ನಡೆದಿದೆ. ವಿವಾಹದ ದಿಬ್ಬಣ ಖಾನ್ಪುರದಿಂದ ಆರಂಭವಾಗಿತ್ತು. ವಿವಾಹದ ದಿಬ್ಬಣ ಸಾಗುತ್ತಿರುವಾಗ ಇಬ್ಬರು ಅಪರಿಚಿತ ದುಷ್ಕರ್ಮಿಗಳು ತನ್ನ ವಾಹನದ ಮೇಲೆ ಹತ್ತಿ ಗುಂಡು ಹಾರಿಸಿದರು ಎಂದು ಬಾದಲ್ ಪೊಲೀಸರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News