ಪುತ್ರಿಯನ್ನು ಅಂಗನವಾಡಿಗೆ ಸೇರಿಸಿದ ಜಿಲ್ಲಾಧಿಕಾರಿಗೆ ವ್ಯಾಪಕ ಪ್ರಶಂಸೆ

Update: 2019-01-09 15:42 GMT

ತಿರುನಲ್ವೇಲಿ,ಜ.9: ತಿರುನಲ್ವೇಲಿ ಜಿಲ್ಲಾಧಿಕಾರಿಯಾಗಿರುವ ಕರ್ನಾಟಕ ಮೂಲದ ಶಿಲ್ಪಾ ಪ್ರಭಾಕರ ಸತೀಶ ಅವರು ತನ್ನ ಮಗಳನ್ನು ಪಾಳ್ಯಂಕೊಟ್ಟೈನ ಅಂಗನವಾಡಿ ಕೇಂದ್ರಕ್ಕೆ ಸೇರಿಸುವ ಮೂಲಕ ಜನರ ಹೃದಯಗಳನ್ನು ಗೆದ್ದಿದ್ದಾರೆ. ಅಂಗನವಾಡಿ ಕೇಂದ್ರಗಳು ಬಡವರಿಗಾಗಿಯೇ ಇರುವುದು ಎಂದು ಹೆಚ್ಚಿನವರು ಪರಿಗಣಿಸಿದ್ದಾರಾದರೂ ಶಿಲ್ಪಾ ಆ ಬಗ್ಗೆ ಯೋಚಿಸಿಲ್ಲ.

ತನ್ನ ಮಗಳು ಅಂಗನವಾಡಿಗೆ ಹೋಗಲು ಆರಂಭಿಸಿದ ಬಳಿಕ ಆಕೆಯ ತಮಿಳು ಸುಧಾರಿಸಿದೆ ಎಂದು ಶಿಲ್ಪಾ ಖುಷಿ ಪಟ್ಟುಕೊಂಡಿದ್ದಾರೆ.

“ನನ್ನ ಮಗಳು ಸಮಾಜದ ಎಲ್ಲ ವರ್ಗಗಳ ಜನರೊಡನೆ ಬೆರೆಯಬೇಕು ಮತ್ತು ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿತುಕೊಳ್ಳಬೇಕು ಎಂದು ನಾನು ಬಯಸಿದ್ದೇನೆ. ಇದೇ ಕಾರಣಕ್ಕಾಗಿ ನರ್ಸರಿ ಶಾಲೆಯ ಬದಲು ಅಂಗನವಾಡಿಗೆ ಮಗಳನ್ನು ಸೇರಿಸಿದ್ದೇನೆ” ಎಂದು ತಿರುನೆಲ್ವೇಲಿಯ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿರುವ ಶಿಲ್ಪಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News