ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡ ಹಾರ್ದಿಕ್ ಪಟೇಲ್

Update: 2019-03-29 12:18 GMT

ಅಹ್ಮದಾಬಾದ್, ಮಾ.29 : ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಗುಜರಾತ್ ನ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.

ಗುಜರಾತ್ ನ ಮೆಹ್ಸಾನಾದಲ್ಲಿ  2015ರಲ್ಲಿ ನಡೆದ   ಹಿಂಸಾಚಾರಕ್ಕೆ ಸಂಬಂಧಿಸಿ ತಾನು ದೋಷಿ ಎಂದು ಘೋಷಿಸಿರುವುದಕ್ಕೆ ತಡೆ ವಿಧಿಸುವಂತೆ ಹಾರ್ದಿಕ್  ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ. 

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು  ಬಾಕಿ ಇರುವಾಗ  ಹೈಕೋರ್ಟ್  ತೀರ್ಪು ಹೊರಬಂದಿರುವ  ಹಿನ್ನೆಲೆಯಲ್ಲಿ  ಪಟೇಲ್ ಗೆ ತೀವ್ರ ಹಿನ್ನಡೆಯುಂಟಾಗಿದೆ.   ಹಾರ್ದಿಕ್ ಪಟೇಲ್  ಚುನಾವಣೆಯಲ್ಲಿ ಸ್ಪರ್ಧಿಸಲು1951ರ   ಜನಪ್ರತಿನಿಧಿ ಕಾಯ್ದೆಯ  ಪ್ರಕಾರ  ಅನರ್ಹಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News