ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ಶಾಸಕನಿಗೆ ಜೈಲು ಶಿಕ್ಷೆ

Update: 2019-03-29 11:59 GMT

ನೀಮುಚ್ : ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿ ಶಾಸಕ ದಿಲೀಪ್ ಸಿಂಗ್ ಪರಿಹಾರ್ ಹಾಗೂ ಇನ್ನೊಬ್ಬ ಬಿಜೆಪಿ ನಾಯಕನಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಮಂಡ್ಸೌರ್ ಕ್ಷೇತ್ರಕ್ಕೆ ಹಾಲಿ ಸಂಸದ ಸುಧೀರ್ ಗುಪ್ತಾ ಅವರನ್ನೇ ಅಭ್ಯರ್ಥಿಯನ್ನಾಗಿಸಿದ ಖುಷಿಯಲ್ಲಿ ಬೈಕ್ ರ್ಯಾಲಿ ಆಯೋಜಿಸಿ ಪಟಾಕಿ ಸಿಡಿಸಿ ಈ ಇಬ್ಬರು  ಬಿಜೆಪಿ ನಾಯಕರು ಇತರ ನಾಯಕರೊಡನೆ ಸಂಭ್ರಮಿಸಿದ್ದರು.

ಈ ಆಚರಣೆಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್  ಪೊಲೀಸ್ ದೂರು ದಾಖಲಿಸಿತ್ತು. ಪರಿಹಾರ್ ಹೊರತಾಗಿ ನೀಮುಚ್ ನಗರ ಪಾಲಿಕಾ ಮುಖ್ಯಸ್ಥ ರಾಕೇಶ್ ಜೈನ್, ಬಿಜೆಪಿ ಜಿಲ್ಲಾ ನಾಯಕ ಸಂತೋಷ್ ಚೋಪ್ರಾ, ಜೀತು ತಲ್ರೇಜ, ಆಯುಷ್ ಕೊಟ್ಟಾರಿ ಮತ್ತಿತರ 25 ಮಂದಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News