ಜನರು ಎಲ್ಲವನ್ನೂ ಅಳೆದು ತೂಗಿ ಮತ್ತೆ ನಮಗೆ ಅಧಿಕಾರ ನೀಡಿದ್ದಾರೆ: ಪ್ರಧಾನಿ ಮೋದಿ

Update: 2019-06-25 14:11 GMT

ಹೊಸದಿಲ್ಲಿ, ಜೂ.25: ಕಾಂಗ್ರೆಸ್ ಸರಕಾರದ ಆಡಳಿತದಿಂದ ಬೇಸತ್ತ ಜನರು ಬಿಜೆಪಿಯನ್ನು ಆಯ್ಕೆ ಮಾಡಿದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂಸತ್ತಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. “ನೀವು ಕೆಳಮಟ್ಟದಲ್ಲಿದ್ದವರನ್ನು ನೋಡಲಾಗದಷ್ಟು ಮೇಲಕ್ಕೆ ತಲುಪಿಬಿಟ್ಟಿರಿ. ನೀವು ತುಂಬಾ ಎತ್ತರದಲ್ಲಿದ್ದರಿಂದ ಕೆಳಮಟ್ಟದಲ್ಲಿದ್ದವರು ನಿಮಗೆ ಸಣ್ಣವರಾಗಿ, ಅಲ್ಪರಾಗಿ ಕಂಡರು” ಎಂದು ಕಾಂಗ್ರೆಸನ್ನು ಅವರು ಟೀಕಿಸಿದರು.

ತುರ್ತು ಪರಿಸ್ಥಿತಿಗೆ ಸಂಬಂಧಿಸಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯು ಪ್ರಜಾಪ್ರಭುತ್ವಕ್ಕೆ ಕಳಂಕ ಎಂದರು. ಜಯ ಅಥವಾ ಸೋಲಿನ ಆಧಾರದಲ್ಲಿ ಚುನಾವಣೆಯನ್ನು ಪರಿಗಣಿಸುವುದಿಲ್ಲ. 130 ಕೋಟಿ ಭಾರತೀಯರ ಸೇವೆ ಮಾಡುವುದು ನನಗೆ ತೃಪ್ತಿ ನೀಡುವಂತದ್ದು. ಜನರು ಎಲ್ಲವನ್ನೂ ಅಳೆದು ತೂಗಿ ನಾವು ಮತ್ತೊಮ್ಮೆ ಅಧಿಕಾರಕ್ಕೇರುವಂತೆ ಮಾಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News